Latest

ಪೊಲೀಸ್ ಕಮಿಷ್ನರ್ ಕಚೇರಿ ಬಳಿಯೇ ದರೋಡೆ; ಕಾರಲ್ಲಿದ್ದ 4.5 ಲಕ್ಷ ಕದ್ದು ಎಸ್ಕೇಪ್ ಆದ ಕಳ್ಳರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೊಲೀಸ್ ಕಮೀಷ್ನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಲಕ್ಷ್ಮೀಶ್ ಎಂಬುವವರು ಪೊಲೀಸ್ ಕಮಿಷ್ನರ್ ಕಚೇರಿ ಬಳಿ ಕಾರನ್ನು ನಿಲ್ಲಿಸಿ ತೆರಳಿದ್ದರು. ಈ ವೇಳೆ ಕಾರಿನ ಗಾಜು ಒಡೆದು ದಿಷ್ಕರ್ಮಿಗಳು ಕಾರಿನಲ್ಲಿದ್ದ 4.5 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಲಕ್ಷ್ಮೀಶ್ ಮನೆ ಸಾಲದ ಇಎಂಐ ಕತ್ಟಲೆಂದು ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಎರಡು ಬೈಕ್ ಗಳಲ್ಲಿ ಬ್ಯಾಂಕ್ ನಿಂದ ಲಕ್ಷ್ಮೀಶ್ ಅವರನ್ನು ಫಾಲೋ ಮಾಡಿಕೊಂಡು ಬಂದು ಈ ಕೃತ್ಯವೆಸಗಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ; ಶಾಸಕ ಜಮೀರ್ ಗೆ ಡಿಕೆಶಿ ವಾರ್ನಿಂಗ್

Home add -Advt

Related Articles

Back to top button