Latest

ಪುರಸಭೆ ಸದಸ್ಯನ ಗೋದಾಮಿನಲ್ಲಿ ರಾಶಿಗಟ್ಟಲೆ ಪಡಿತರ ಅಕ್ಕಿ; 7 ಜನರ ಬಂಧನ

ಪ್ರಗತಿವಾಹಿನಿ ಸುದ್ದಿ; ಮೈಸೂರು:  ಜಿಲ್ಲೆಯ ತಿ.ನರಸೀಪುರ ಪುರಸಭೆ ಸದಸ್ಯ ಕಿರಣ್‌ ಅವರಿಗೆ ಸೇರಿದ ಗೋದಾಮಿನಲ್ಲಿ ರಾಶಿಗಟ್ಟಲೆ ಪಡಿತರ ಅಕ್ಕಿ ಮೂಟೆ ಪತ್ತೆಯಾದ ಘಟನೆ  ನಡೆದಿದೆ.

ತಿ.ನರಸೀಪುರ ಪುರಸಭೆಯ ಬಿಜೆಪಿ ಸದಸ್ಯ ಎಸ್.ಕೆ. ಕಿರಣ್ ಅವರು ಅಕ್ರಮವಾಗಿ ಪಡಿತರ ಅಕ್ಕಿ ಶೇಖರಣೆ ಮಾಡಿಕೊಂಡು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.ಬಡವರ ಮನೆ ಸೇರಬೇಕಿದ್ದ ಅನ್ನಭಾಗ್ಯ ಅಕ್ಕಿ ಪುರಸಭೆ ಸದಸ್ಯನ ಗೋದಾಮಿನಲ್ಲಿ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಅಕ್ರಮ ಪಡಿತರ ಗೋದಾಮಿನ ಮೇಲೆ ಪೋಲೀಸರು ದಾಳಿ ನಡೆಸಿದ್ದಾರೆ.

Home add -Advt

ಮೈಸೂರು ಜಿಲ್ಲಾ ಎಸ್ಪಿ ಆರ್. ಚೇತನ್, ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಮಾರ್ಗದರ್ಶನದಲ್ಲಿ ಪೋಲೀಸರು ದಾಳಿ ನಡೆಸಿದ್ದಾರೆ.ದಾಳಿ ವೇಳೆ ಸುಮಾರು 20 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ಪತ್ತೆಯಾಗಿದೆ. ಈ ಸಂಬಂಧ ಕಿರಣ್ ತಂದೆ ಸೇರಿದಂತೆ 7 ಜನರನ್ನ ಬಂಧಿಸಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಗೀತಾ, ಆಹಾರ ಇಲಾಖೆ ಶಿರಸ್ತೇದಾರ್ ಮಂಜುನಾಥ್, ಕಂಠಿ, ದೇವಣ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು ದಸರಾಕ್ಕೆ ಖರ್ಚಾಗಿದ್ದೆಷ್ಟು? ಲೆಕ್ಕಾಚಾರ ಒಪ್ಪಿಸಿದ ಸಚಿವ ಸೋಮಶೇಖರ

https://pragati.taskdun.com/politics/mysore-dasara-2022expenditures-t-somashekhar/

Related Articles

Back to top button