National

*ಬಾಂಬ್ ನಿಷ್ಕ್ರಿಯಗೊಳಿಸುವಾಗ ಸ್ಫೋಟ: ವೀರಮರಣ ಹೊಂದಿದ ಯೋಧ*

ಪ್ರಗತಿವಾಹಿನಿ ಸುದ್ದಿ: ಕಾಶ್ಮೀರದಲ್ಲಿ ನಿನ್ನೆಯಷ್ಟೆ ಉಗ್ರರ ವಿರುದ್ಧ ನಡೆದ ಕಾದಾಟದಲ್ಲಿ  ಭಾರತೀಯ ಸೇನೆಯ ಅಧಿಕಾರಿ ವೀರಮರಣ ಹೊಂದಿದ್ದರು. ಇದೀಗ ಮತ್ತೊಬ್ಬ ಯೋಧ ಸಾವನ್ನಪ್ಪಿದ್ದಾರೆ.

ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಸ್ಪೋಟಗೊಂಡ ಪರಿಣಾಮ ಜಾಗ್ವಾ‌ರ್ ಜವಾನ್ ಬೆಟಾಲಿಯನ್ ಗೆ ಸೇರಿದ ಯೋಧರೊಬ್ಬರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. 

ಮಾವೋವಾದಿ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಮೃತ ಯೋಧನನ್ನು 203 ಕೋಬ್ರಾ ಬೆಟಾಲಿಯನ್ ಸುನಿಲ್ ಧಾನ್ ಎಂದು ಗುರತಿಸಲಾಗಿದೆ. ನಕ್ಸಲೀಯರು ಅಳವಡಿಸಿದ್ದ ಸುಧಾರಿತ ಸ್ಫೋಟಕವನ್ನು ನಿಷ್ಕ್ರಿಯಗೊಳಿಸುವ ವೇಳೆ ಬಾಂಬ್‌ ಸ್ಫೋಟಗೊಂಡ ಪರಿಣಾಮ ಅವಘಡ ಸಂಭವಿಸಿದೆ. 

ಘಟನೆಯಲ್ಲಿ ಮತ್ತೊಬ್ಬ ಹೆಡ್ ಕಾನ್ಸಟೇಬಲ್‌ ವಿಷ್ಣು ಸಾಯಿ ತೀವ್ರವಾಗಿ ಗಾಯಗೊಂಡಿದ್ದಾರೆ. ಚೋಟಾನಗ‌ರ್ ಮತ್ತು ಜರಿಕೇಲಾ ಪ್ರದೇಶದಲ್ಲಿ ಸೇನಾಕಾರ್ಯಾಚರಣೆ ಮುಂದುವರೆದಿದ್ದು, ಉಗ್ರರು ಮತ್ತು ರಕ್ಷಣಾ ಪಡೆಗಳ ನಡುವೆ ಗುಂಡಿನ ವಿನಿಮಯ ಸಾಗಿದೆ.

Home add -Advt

Related Articles

Back to top button