Belagavi NewsBelgaum NewsCrimeKannada NewsKarnataka NewsNational

*ಕಾರ್ ಹಾಗೂ ಬೈಕ್ ನಡುವೆ ಅಪಘಾತ;  ಬೈಕ್ ಸವಾರ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಸೊಪ್ಪಡ್ಲ ಗ್ರಾಮದ ಬೆಳಗಾವಿ- ಬಾಗಲಕೋಟೆ ರಸ್ತೆಯಲ್ಲಿ ಕಾರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಸಾವನ್ನಪ್ಪಿದ್ದಾನೆ.

25 ವರ್ಷದ ದಿವ್ಯ ಎಂಬ ಯುವತಿ ಹುಂಡೈ ಐ-20 ಕಾರನ್ನು ವೇಗವಾಗಿ ಓಡಿಸಿ ಬೈಕ್ ಗೆ ಗುದ್ದಿದ್ದು, ಲಕ್ಕಣ್ಣ ಬಸಪ್ಪ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

Home add -Advt

ಅಪಘಾತದ ವೇಳೆ ವ್ಯಕ್ತಿಯ ತಲೆಗೆ, ಎದೆಗೆ, ಕೈಕಾಲುಗಳಿಗೆ ಗಾಯವಾಗಿ ವ್ಯಕ್ತಿ ಮೃತಪಟ್ಟಿದ್ದಾನೆ. ಜೊತೆಗೆ ಯುವತಿ ಓಡಿಸುತ್ತಿದ್ದ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ದಿಲೀಪ ರಾಜಪಾಲಾನಿ, ಸದಾಶಿವ ಮಲಕಪ್ಪ ದೇಶೆಟ್ಟಿ ಎಂಬುವರಿಗೆ ಗಂಭಿರಗಾಯಗಳಾಗಿವೆ.

ಈ ಬಗ್ಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಮುರಗೋಡ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button