
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಾಹಸ ಇಂದಿನ ಯುವಕರಿಗೆ ಪ್ರೇರಣೆ ಎಂದು ಕಾಂಗ್ರೆಸ್ ಮುಖಂಡ, ಹರ್ಷ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಶಿವಾಜಿಯ ದೂರದೃಷ್ಟಿ, ಸಮಾಜದ ಸಂಘಟನೆಯ ರೀತಿ, ನಾಯಕತ್ವ ಗುಣ, ಪರಾಕ್ರಮ ಇವೆಲ್ಲ ನಮಗೆ ಆದರ್ಶವಾಗಿ ನಿಲ್ಲುತ್ತವೆ. ಯುವಕರು ಇಂತಹ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ಸಾಗಿದಾಗ ಆದರ್ಶ ಸಮಾಜ ನಿರ್ಮಾಣವಾಗುತ್ತದೆ ಎಂದರು ಚನ್ನರಾಜ.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಕೇಶವ ಚೌಗುಲೆ, ಮನೋಹರ ಬಾಂಡಗೆ, ಗುಂಡು ಚೌಗುಲೆ, ಈರಪ್ಪ ಚೌಗುಲೆ, ಬರ್ಮಾ, ಅರ್ಜುನ ಪಾಟೀಲ, ರಾಮಾ ಕಾಕತ್ಕರ್, ಜ್ಯೋತಿಬಾ ಚೌಗುಲೆ, ಬಾಳು ಚೌಗುಲೆ, ಸಹದೇವ ಬಾಂಡಗೆ, ಸುರೇಶ ಬಾಂಡಗೆ, ಯಲ್ಲಪ್ಪ ಬಾಂಡಗೆ, ಮಲ್ಲಪ್ಪ ದೊಡ್ಡಕಲ್ಲಣ್ಣವರ, ಪದ್ಮರಾಜ ಪಾಟೀಲ ಹಾಗೂ ಮಹಿಳಾ ಮಂಡಳದವರು ಉಪಸ್ಥಿತರಿದ್ದರು.