
ಬೋಟ್ ಮೂಲಕ 17 ಕುಟುಂಬ ಹೊರತಂದ ಶಾಸಕ ಅಭಯ ಪಾಟೀಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ನಗರದಲ್ಲಿ ಪ್ರವಾಹ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ವಿಕೋಪಕ್ಕೆ ಹೋಗುತ್ತಿದೆ. ನಗರದ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಮತ್ತು ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರವಾಹ ಸಂತ್ರಸ್ತರ ನೆರವಿಗಾಗಿ ಹಗಲು-ರಾತ್ರಿ ಕಾರ್ಯಾಚರಣೆಗಿಳಿದಿದ್ದಾರೆ. ಅಧಿಕಾರಿಗಳ ತಂಡವೂ ಬೆನ್ನಿಗಿದೆ.
ಆದರೆ ಮಳೆ ಕಡಿಮೆಯಾಗದಿರುವದುರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಇಂದು ಬೆಳಗ್ಗೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲ ಮತ್ತು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು 2 ಬೋಟ್ ಬಳಸಿ 17 ಕುಟುಂಬಗಳನ್ನು ಹೊರಗೆ ತಂದಿದ್ದಾರೆ.
ನಗರದಲ್ಲಿ ವಿದ್ಯುತ್ ಸಮಸ್ಯೆ ಕೂಡ ತೀವ್ರವಾಗಿದೆ. ಹಲವೆಡೆ ಮರ, ಗಿಡಗಳು ಬಿದ್ದು ಸಮಸ್ಯೆಯಾದರೆ ಕೆಲವೆಡೆ ವಿದ್ಯುತ್ ಪರಿವರ್ತಕಗಳು, ಮೀಟರ್ ಗಳು ನೀರಿನಲ್ಲಿ ಮುಳುಗಿವೆ. ಅವೇಕ ಕಡೆ ಅಪಾಯದ ಮುನ್ನೆಚ್ಚರಿಕೆಯಿಂದ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.