Kannada NewsLatest

ಅಪಹರಣಕ್ಕೆ ಒಳಗಾದ ಮಹಿಳೆ ಪತ್ತೆ

ಪ್ರಗತಿವಾಹಿನಿ ಸುದ್ದಿ, ಶಿರಸಿ –  ಡಿ.25ರಂದು ಶಿರಸಿಯ ಬಸವೇಶ್ವರ ನಗರದಿಂದ  ಋತಿಕಾ/ ಮಣಿಕಂಠ ಕೊಡಿಯಾ ವಯಾ ೧೮ ವರ್ಷ ಇವಳನ್ನು ಅವಳ  ತಾಯಿ ರೂಪಾ ಶಿರ್ಸೆಕರ್, ಕಿರಣ ಬೆಲ್ಲದ್ ಹಾಗೂ ಇತರ ನಾಲ್ಕೈದು ಜನ ಸೇರಿ ಬಲವಂತವಾಗಿ ಅಪಹರಿಸಿಕೊಂಡು ಹೋದ ಬಗ್ಗೆ ಗಂಡ ಮಣಿಕಂಠ ಕೊಡಿಯಾ ನೀಡಿದ ದೂರಿನ ಆಧಾರದ ಮೇಲೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದ ಶಿರಸಿ ಪೊಲೀಸರು ಡಿಎಸ್ಪಿ ರವಿ ಡಿ ನಾಯ್ಕ  ಸಿಪಿಐ  ಪ್ರದೀಪ್ ಬಿಯು ಮಾರ್ಗದರ್ಶನದಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿಎಸ್ಐ ನಾಗಪ್ಪ ಬಿ ನೇತೃತ್ವದ ಎಎಸ್ಐ ಶಿವಕುಮಾರ ಪೂಜಾರಿ, ಸಿಬ್ಬಂದಿಗಳಾದ ರೋನಾಲ್ಡ ಅಲ್ಮೇಡಾ, ಮೋಹನ ನಾಯ್ಕ, ವೆಂಕಟೇಶ ನಾಯಕ, ಪ್ರದೀಪ್ ಕೈಟಕರ್ ರವರನ್ನು ಒಳಗೊಂಡ ತಂಡ ಇಂದು ಅಪಹರಣಕ್ಕೆ ಒಳಗಾದ ಮಹಿಳೆಯನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದೆ.

ಪೂರ್ಣ ವಿವರ –  ಹೆತ್ತ ಮಗಳನ್ನೇ ಕಿಡ್ನ್ಯಾಪ್ ಮಾಡಿದ ತಾಯಿ

Home add -Advt

Related Articles

Back to top button