Belagavi NewsBelgaum NewsKannada NewsKarnataka News

*ಜ್ಯೂಸ್ ಕುಡಿಸಿ ಬಸ್ ನಲ್ಲಿದ್ದವರ ಪ್ರಜ್ಞೆ ತಪ್ಪಿಸಿ ಆಭರಣ ದರೋಡೆ ಮಾಡಿದ ಕಳ್ಳರು*

ಪ್ರಗತವಾಹಿನಿ ಸುದ್ದಿ: ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿದ್ದ ಬಸ್ ನಲ್ಲಿ ಪ್ರಯಾಣಿಕರಿಗೆ ಜ್ಯೂಸ್ ಕೊಟ್ಟು ಬಸ್ ನಲ್ಲಿದ್ದವರ ಪ್ರಜ್ಞೆ ತಪ್ಪಿಸಿ ಆಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಜರುಗಿದೆ.

ಬೆಳಗಾವಿಯಲ್ಲಿ ಚಾಕ್ಲೀಟ್ ಗ್ಯಾಂಗ್ ಮಾದರಿಯಲ್ಲಿ ಮತ್ತೆ ಆ್ಯಕ್ಟಿವ್ ಆಗಿರುವ ಜ್ಯೂಸ್ ಗ್ಯಾಂಗ್, ಜ್ಯೂಸ್ ಕೊಟ್ಟು ಬಸ್ ನಲ್ಲಿದ್ದವರ ಪ್ರಜ್ಞೆ ತಪ್ಪಿಸಿ ಆಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಬೆಳಗಾವಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿಯೇ ಪ್ರಯಾಣಿಕರನ್ನು ಸುಲಿಗೆ ಮಾಡಲಾಗಿದೆ. ಸಂಜೀವ್ ಖೋತ(40) ಹಾಗೂ ಮತ್ತೋರ್ವ ಪ್ರಯಾಣಿಕರಿಗೆ ದರೋಡೆ ಮಾಡಿದ್ದಾರೆ. ಜ್ಯೂಸ್ ಕುಡಿದವರು ಈಗ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Home add -Advt

Related Articles

Back to top button