Kannada NewsKarnataka News

ಎರಡೂವರೆ ಕೋಟಿ ರೂ.ಕಾಮಗಾರಿಗೆ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುಮಾರು 4 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೊಂದನ್ನು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಭೂಮಿ ಪೂಜೆ ನೆರವೇರಿಸಲಾಯಿತು.
ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ  ಸಂತಿ ಬಸ್ತವಾಡ, ವಾಘವಾಡೆ, ದೇಸೂರ ಹಾಗೂ ರಂಗೋಳಿ ಗ್ರಾಮಗಳಿಗೆ ಸಂಪರ್ಕ  ಕಲ್ಪಿಸುವ ರಸ್ತೆಯ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಪ್ರಯತ್ನದಿಂದ 2.5 ಕೋಟಿ ರೂ. ಮಂಜೂರಾಗಿದೆ. ಲಕ್ಷ್ಮಿ ಹೆಬ್ಬಾಳಕರ್ ಅನುಪಸ್ಥಿತಿಯಲ್ಲಿ  ಸ್ಥಳೀಯ ಜನ ಪ್ರತಿನಿಧಿಗಳು, ಗ್ರಾಮಗಳ  ಹಿರಿಯರು, ಯುವರಾಜ  ಕದಂ, ಮೃಣಾಲ್ ಹೆಬ್ಬಾಳಕರ ಹಾಗೂ  ಕಾರ್ಯಕರ್ತರು  ಸೇರಿ  ಚಾಲನೆಯನ್ನು ನೀಡಿದರು.

Related Articles

Back to top button