Kannada NewsKarnataka NewsNationalPolitics

*ಭುಗಿಲೆದ್ದ ಹಿಂಸಾಚಾರ: 72 ಸಾವು*

ಪ್ರಗತಿವಾಹಿನಿ ಸುದ್ದಿ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಆಡಳಿತಾರೂಢ ಅವಾಮಿ ಲೀಗ್‌ನ ಬೆಂಬಲಿಗರು ಮತ್ತು ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ 72 ಜನರು ಮೃತಪಟ್ಟಿದ್ದಾರೆ.

ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಆಗ್ರಹಿಸಿ ಅಸಹಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತಿಭಟನಾಕಾರರು ಬಂದಿದ್ದರು. ಅವಾಮಿ ಲೀಗ್, ಛಾತ್ರ ಲೀಗ್ ಮತ್ತು ಜುಬೋ ಲೀಗ್‌ನ ಕಾರ್ಯಕರ್ತರು ಇದನ್ನು ವಿರೋಧಿಸಿದರು. ನಂತರ ಎರಡು ಕಡೆಯ ನಡುವೆ ಘರ್ಷಣೆ ನಡೆಯಿತು.

Home add -Advt

ಪ್ರತಿಭಟನಾಕಾರರು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿದ್ದು ಅಲ್ಲದೆ ಮೀಸಲಾತಿ ಸುಧಾರಣೆಗಳ ಕುರಿತು ಇತ್ತೀಚಿನ ಪ್ರತಿಭಟನೆಗಳಲ್ಲಿ ಸಾವನ್ನಪ್ಪಿದವರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಧ್ವನಿ ಎತ್ತಿದರು. ಅಸಹಕಾರ ಚಳವಳಿಯ ಮೊದಲ ದಿನ ರಾಜಧಾನಿಯ ಸೈನ್ಸ್ ಲ್ಯಾಬ್ ಛೇದಕದಲ್ಲೂ ಪ್ರತಿಭಟನಾಕಾರರು ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸೈನ್ಸ್ ಲ್ಯಾಬ್, ಧನ್ಮಂಡಿ, ಮೊಹಮ್ಮದ್‌ಪುರ, ಟೆಕ್ನಿಕಲ್, ಮೀರ್‌ಪುರ-10, ರಾಂಪುರ, ತೇಜಗಾಂವ್, ಫಾರ್ಮ್‌ಗೇಟ್, ಪಂಥ್‌ಪತ್, ಜತ್ರಾಬರಿ ಮತ್ತು ಢಾಕಾದ ಉತ್ತರಾದಲ್ಲಿಯೂ ಕ್ಯಾಲಿಗಳನ್ನು ಆಯೋಜಿಸಲಾಗುವುದು ಎಂದು ಪ್ರತಿಭಟನೆಯ ಸಂಘಟಕರು ತಿಳಿಸಿದ್ದಾರೆ.

Related Articles

Back to top button