Belagavi NewsBelgaum NewsKarnataka News

*ನರ್ಸಿಂಗ್ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದ ಡಾ. ಕರ್ನಲ್ ಎಂ.ದಯಾನಂದ*

ಪ್ರಗತಿವಾಹಿನಿ ಸುದ್ದಿ: ರೋಗಿಯ ಆರೈಕೆಯಲ್ಲಿ ತೊಡುಗುವ ಸೇವೆ ಅತ್ಯಂತ ಒಳ್ಳೆಯದು. ಕರುಣಾಮಯಿಯಾಗಿ ತಾಯಿ ರೂಪದಲ್ಲಿ ಆರೈಕೆ ಮಾಡುವ ನರ್ಸಿಂಗ್ ವೃತ್ತಿಯು ಅಷ್ಟೇ ಕಠಿಣವಾದ್ದು. ಆದ್ದರಿಂದ ಪ್ರಸಕ್ತ ವೈದ್ಯಕೀಯ ಕ್ಷೇತ್ರದಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತ ಅವುಗಳನ್ನು ಅಳವಡಿಸಿಕೊಳ್ಳಬೇಕು. ಈಗಿರುವ ಸ್ಪರ್ಧಾತ್ಮಕ ಯುಗದಲ್ಲಿ ಗುಣಾತ್ಮಕ ಹಾಗೂ ಧನಾತ್ಮಕ ಭಾವನೆಯಿಂದ ಕಲಿಕೆ ನಿರಂತರವಾಗಿರಲಿ. ಶಸಸ್ತ್ರ ಪಡೆ ಸೇರಿದಂತೆ ವಿಶ್ವದಲ್ಲಿ ಸಾಕಷ್ಟು ಅವಕಾಶಗಳುಂಟು ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ವಿಶ್ವ ನರ್ಸಿಂಗ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನರ್ಸಿಂಗ ಸಿಬ್ಬಂದಿಯು ರೋಗಿಗಳ ಆರೈಕೆಯೊಂದಿಗೆ ಸಂಶೋದನೆಗಳಲ್ಲಿ ತೊಡಗಬೇಕು. ಸದಾ ಮಾಹಿತಿಯೊಂದಿಗೆ ಸನ್ನದ್ದವಾಗಿರಬೇಕು ಎಂದ ಅವರು, ನರ್ಸಿಂಗ್ ಸೇವೆ ಬಹಳ ಮುಖ್ಯ. ನರ್ಸಿಂಗ್ ಸೇವೆಯ ಅವಶ್ಯಕತೆ ಸಾಕಷ್ಟಿದ್ದು, ವೈದ್ಯರಿಗಿಂತ ಮುಂಚೆ ರೋಗಿಗಳ ಸಂಪರ್ಕಕ್ಕೆ ಬರುವವರು ಶುಶ್ರೂಶಕರು. ಸಹಜವಾಗಿಯೆ ವೈದ್ಯರು ಮತ್ತು ರೋಗಿಗಳ ಮದ್ಯೆ ಶುಶ್ರೂಶಕರು ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.


ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, 24 ವರ್ಷಗಳ ಹಿಂದಿನ ಭೂಕಂಪ, 2005 ರಲ್ಲಿನ ಪ್ರವಾಹ ಹಾಗೂ ಸುನಾಮಿ ಸಂದರ್ಭದಲ್ಲಿ ನರ್ಸಿಂಗ್ ಸಿಬ್ಬಂದಿ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ಅಚಲ ಧೃಡವಾದ ನಂಬಿಕೆಯೊಂದಿಗೆ ಗುರಿ ಮುಟ್ಟುವವರೆಗೆ ಓಡಬೇಕಾಗುತ್ತದೆ. ಪ್ರಯತ್ನವೇ ಪರಮಾತ್ಮ ಸೇವೆ ಎಂದರು.

ಇದೇ ಸಂದರ್ಭದಲ್ಲಿ ರೋಗಿಗಳ ಆರೈಕೆಯಲ್ಲಿ ಅತ್ಯುತ್ತಮವಾಗಿ ತೊಡಗಿಕೊಂಡಿದ್ದ ನರ್ಸಿಂಗ ಸಿಬ್ಬಂದಿಗಳನ್ನು ಸತ್ಕರಿಸಲಾಯಿತು. ವೇದಿಕೆಯ ಮೇಲೆ ಡಾ. ಆರ್ ಬಿ ನೇರ್ಲಿ , ಡಾ. ಆರಿಫ್ ಮಾಲ್ದಾರ, ಡಾ. ರಾಜೇಶ ಪವಾರ, ಡಾ. ವಿರೇಶ ನಂದಗಾವಿ ಅವರು ಉಪಸ್ಥಿತರಿದ್ದರು. ಆಸ್ಪತ್ರೆಯ ನರ್ಸಿಂಗ್ ಸೂಪರಿಟೆಂಡೆಂಟ್ ಶಕುಂತಲಾ ಕೋರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಲ್ವಿ ಮುದೋಳ ಅವರು ಸ್ವಾಗತಿಸಿದರೆ, ಆಶಾರಾಣಿ ಪ್ರಾರ್ಥಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button