Kannada NewsKarnataka News

ಬೆಳಗಾವಿಯಲ್ಲಿ ನಾಳೆ ಹರಿಬಾವು ವಝೆ ಭೇಟಿ ಮಾಡಲಿರುವ ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶುಕ್ರವಾರ ಬೆಳಗಾವಿಗೆ ಆಗಮಿಸಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರ್ ಎಸ್ಎಸ್ ಹಿರಿಯ ಪ್ರಚಾರಕ ಹರಿಬಾವು ವಝೆ ಅವರನ್ನು ಭೇಟಿ ಮಾಡಲಿದ್ದಾರೆ.

86 ವರ್ಷದ ವಝೆ ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ನಗರದ ಗೂಡ್ಸಶೆಡ್ ರಸ್ತೆಯಲ್ಲಿರುವ ಸಂಘದ ಕಾರ್ಯಾಲಯದಲ್ಲಿರುವ ವಝೆ ಅವರನ್ನು ಯಡಿಯೂರಪ್ಪ ಭೇಟಿ ಮಾಡಲಿದ್ದಾರೆ.

Home add -Advt

ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ತಕ್ಷಣ ನೇರವಾಗಿ ವಝೆಯವರಿರುವ ಸಂಘದ ಕಾರ್ಯಾಲಯಕ್ಕೆ ಭೇಟಿ ನೀಡಿ ನಂತರ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಕೊರೋನಾ ಸಂಬಂಧಿತ ಸಭೆಗೆ ಯಡಿಯೂರಪ್ಪ ಆಗಮಿಸುವರು.

ಹರಿಬಾವು ವಝೆ ಅಖಿಲ ಭಾರತ ಮಟ್ಟದ ಇತಿಹಾಸ ಸಂಕಲನ ಸಮಿತಿಯಲ್ಲಿ ಹಾಗೂ ಹಿಂದಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರ ಕನಸಿನ ಯೋಜನೆಯಾಗಿದ್ದ ನದಿ ಜೋಡಣೆ ಸಮಿತಿಯಲ್ಲಿ ಕೂಡ ಮಹತ್ವದ ಪಾತ್ರ ವಹಿಸಿದ್ದರು.

ಕಳೆದ ಕೆಲವು ತಿಂಗಳಿನಿಂದ ಅವರು ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಅವರನ್ನು ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸುವರು.

500 ಕೋಟಿ ರೂ. ಪ್ಯಾಕೇಜ್, ಜೂನ್ 14ರ ವರೆಗೆ ಲಾಕ್ ಡೌನ್ ವಿಸ್ತರಣೆ – ಯಡಿಯೂರಪ್ಪ

Related Articles

Back to top button