ಪ್ರಗತಿವಾಹಿನಿ ಸುದ್ದಿ, ಗೋಕಾಕ:
ನಗರಸಭೆ ಕಸ ಸಂಗ್ರಹಿಸುವ ವಾಹನ ಬೈಕ್ಗೆ ಢಿಕ್ಕಿ ಹೊಡೆದು ಓರ್ವ ಸ್ಥಳದಲ್ಲೆ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ನಗರದ ಕೆಎಲ್ಇ ಆಸ್ಪತ್ರೆ ರಸ್ತೆಯಲ್ಲಿ ಜರುಗಿದೆ.
ಬುಧವಾರ ನಗರದ ಕೆಎಲ್ಇ ಆಸ್ಪತ್ರೆ ಎದುರು ಮಧ್ಯಾಹ್ನ ೧೨ಕ್ಕೆ ಕಸ ವಿಲೇವಾರಿಗಾಗಿ ಸಾಗುತ್ತಿದ್ದ ವಾಹನ ಬೈಕ್ಗೆ ಡಿಕ್ಕಿ ಹೊಡೆದು ವಿವೇಕಾನಂದ ನಗರದ ನಿವಾಸಿ ಅಭಿಷೇಕ ಅಶೋಕ ಹೂಲಿಕಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಸಂತೋಷ ಶಿವಾಜಿ ಶೇಂಡೊಲೆ ಗಂಭೀರ ಗಾಯಗೊಂಡಿದ್ದಾನೆ. ಗೋಕಾಕ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.