ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ಕೆಎಲ್ಎಸ್ ಐಎಂಇಆರ್ನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಜಾಗೋ ಭಾರತ ಘೋಷ ವಾಕ್ಯದೊಂದಿಗೆ ’ಸಮಾಗಮ-೨೦೧೯’ ಮ್ಯಾನೇಜಮೆಂಟ್ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಸಮ್ಮೇಳನದಲ್ಲಿ ಐಸ್ ಬ್ರೆಕರ್, ಉತ್ತಮ ವ್ಯವಸ್ಥಾಪಕ), ಸಂಯೋಜನ (ತಂಡ ಕಟ್ಟುವಿಕೆ), ಸಮಜ್ಞಾನ (ಕ್ವಿಜ್), ಸಿಎಸ್ಆರ್, ಸಂಶೋಧನೆ, ಸಮನ್ವಯ (ಮುಖ್ಯ ಸ್ಪರ್ಧೆ) ಹಾಗೂ ಸಾಮರ್ಥ್ಯ (ಸಾಂಸ್ಕೃತಿಕ ಸ್ಪರ್ಧೆಗಳು), ಸಮಚಿತ್ತ ಹಾಗೂ ಮಾನವ ಸಂಪನ್ಮೂಲ, ಹಣಕಾಸು ಹಾಗೂ ಮಾರ್ಕೆಟಿಂಗ್ ಸಂಬಂಧಿತ ವಿನೂತನ ಸ್ಪರ್ಧೆಗಳು ನಡೆದವು.
ಅಡಾಪ್ಟಿವ್ ಅಗ್ರಿಟೆಕ್ ಸೊಲ್ಯೂಷನ್ಸ್ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರದ್ ಪಾಟೀಲ ಹಾಗೂ ನಂದಿತಾ ಏಣಗಿ ಸಮಾರಂಭ ಉದ್ಘಾಟಿಸಿದರು. ಐಎಂಇಆರ್ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಡಾ. ಶಶಿಧರ ಕುಲಗೋಡ ಉಪಸ್ಥಿತರಿದ್ದರು.
ಕೆಎಲ್ಇ ಸಿಬಾಲ್ಕ ಸಮಗ್ರ ಚಾಂಪಿಯನ್ ಆಗಿ, ಅದೇ ಕಾಲೇಜಿನ ಕಿಶನ್ ಕುಮಾರ ಉತ್ತಮ ವ್ಯವಸ್ಥಾಪಕರಾಗಿ ಆಯ್ಕೆಯಾದರು.
ಪ್ರತಿ ವರ್ಷ ಐಎಂಇಆರ್ ಕಾಲೇಜು ಲಾಭರಹಿತ ಸರಕಾರೇತರ ಸಂಸ್ಥೆಗಾಗಿ ಧನ ಸಂಗ್ರಹಿಸಿ ಸಹಾಯ ಮಾಡುತ್ತಿದೆ. ಈ ವರ್ಷ ರಾಜ್ಯಲಕ್ಷ್ಮೀ ಮಕ್ಕಳ ಫೌಂಡೇಶನ್ ಸಹಾಯಾರ್ಥ ನಡೆದ ಕಾರ್ಯಕ್ರಮದಲ್ಲಿ ೨೮೫೨೧ ರೂ. ಸಂಗ್ರಹಿಸಿ ಫೌಂಡೇಶನ್ಗೆ ಹಸ್ತಾಂತರಿಸಲಾಯಿತು.