Latest

ನಾಲೆಗೆ ಕಾರು ಉರುಳಿ ಐವರು ನೀರು ಪಾಲು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸವದತ್ತಿ ತಾಲ್ಲೂಕಿನ ಕಡಬಿ ಶಿವಾಪುರ ಬಳಿ ಕಾರು ನಾಲೆಗೆ ಬಿದ್ದು ಒಂದೇ ಕುಟುಂಬದ 5 ಜನ ನೀರು ಪಾಲಾಗಿದ್ದಾರೆ.

ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ವಾಪಸ್ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ನಾಲೆಗೆ ಬಿದ್ದಿದೆ.

ಚಾಲಕ ಅಡಿವೆಪ್ಪ ಮಾಳಗಿ ಈಜಿ ದಡ ಸೇರಿದ್ದಾನೆ.

Home add -Advt

ಪಕ್ಕೀರವ್ವ ಪೂಜೇರಿ(30), ಹನುಮಂತ ಪೂಜೇರಿ(59), ಲಗಮಣ್ಣ ಪೂಜೇರಿ(37), ಪಾರವ್ವ ಪೂಜೇರಿ(50), ಲಕ್ಷ್ಮೀ ಪೂಜೇರಿ(42) ಮೃತರಾದವರು.

ಮುರಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button