Latest

ಸುರೇಶ ಅಂಗಡಿ ಮಂತ್ರಿಯಾಗ್ತಾರಾ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸತತ 4ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ಬೆಳಗಾವಿ ಕ್ಷೇತ್ರದ ಸುರೇಶ ಅಂಗಡಿ ಈ ಬಾರಿ ಸಚಿವರಾಗ್ತಾರಾ?

ಚುನಾವಣೆ ಪ್ರಚಾರದ ವೇಳೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕ ನಾಯಕರು ಈ ಬಾರಿ ಆಯ್ಕೆಯಾದರೆ ಸುರೇಶ ಅಂಗಡಿ ಕೇಂದ್ರದಲ್ಲಿ ಮಂತ್ರಿಯಾಗ್ತಾರೆ, ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸಗಳನ್ನು ತರ್ತಾರೆ ಎಂದು ಹೇಳಿದ್ದರು.

Home add -Advt

ಕಳೆದ ಅವಧಿಯಲ್ಲಿ ಮಂತ್ರಿ ಮಂಡಳ ವಿಸ್ತರಣೆ ವೇಳೆ ಅಂಗಡಿ ಮಂತ್ರಿಯಾಗ್ತಾರೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕಾರವಾರದ ಅನಂತಕುಮಾರ ಹೆಗಡೆ ಸಚಿವರಾದರು. 

ಈ ಬಾರಿ ಅಂಗಡಿಗೆ ಅದೃಷ್ಟ ಖುಲಾಯಿಸಬಹುದು ಎನ್ನುವ ನಿರೀಕ್ಷೆ ಇದೆ. 

Related Articles

Back to top button