Latest

ಕಟ್ಟಡ ಕುಸಿತ: ಆರೋಪಿಗಳು ಪೊಲೀಸರಿಗೆ ಶರಣು

ಪ್ರಗತಿವಾಹಿನಿ ಸುದ್ದಿ, ಧಾರವಾಡ:

13 ಜನರ ಸಾವಿಗೆ ಕಾರಣವಾದ ಕಟ್ಟಡ ದುರಂತಕ್ಕೆ ಸಂಬಂಧಿಸಿದಂತೆ ಅದರ ಪಾಲುದಾರರು ಪೊಲೀಸರಿಗೆ ಶರಣಾಗಿದ್ದಾರೆ.

ಮಾಜಿ ಸಚಿವ ವಿನಯ ಕುಲಕರ್ಣಿ ಮಾವ ಗಂಗಣ್ಣ ಶಿಂತ್ರಿ, ಪಾಲುದಾರರಾದ ರವಿ ಸಬರದ, ಬಸವರಾಜ ನಿಗದಿ, ರಾಜು ಅವರು ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಕಳಪೆ ಕಾಮಗಾರಿಯೇ ಘಟನೆಗೆ ಕಾರಣ ಎಂದು ಪಾಲಿಕೆ ಅಧಿಕಾರಿಗಳು ದೂರು ನೀಡಿದ್ದರು. ಆರೊಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.

ಇಂಜನಿಯರ್ ವಿವೇಕ್ ಪವಾರ ಎಂಬುವರನ್ನು ಗುರುವಾರ ಕೊಲ್ಲಾಪುರದಲ್ಲಿ ಬಂಧಿಸಿದ್ದರು.

ನಮ್ಮನ್ನು ಪೊಲೀಸರು ಬಂಧಿಸಿಲ್ಲ. ಜನರ ಸಾವು ನೋವು ನೋಡಿ ಮನಸ್ಸಿಗೆ ಬೇಸರವಾಗಿ ನಾವಾಗಿಯೇ ಬಂದಿದ್ದೇವೆ ಎಂದರು.

ನಾವು ತಜ್ಞರಲ್ಲ. ಎಂಜಿನಿಯರ್ ಹೇಳಿದಷ್ಟು ಸಾಮಾನು ತಂದು ಕೊಟ್ಟಿದ್ದೇವೆ. 30 ಸಾವಿರ ಚದರ್ ಅಡಿಯಲ್ಲಿ 5ಸಾವಿರ ಚದರ್ ಅಡಿ ಮಾತ್ರ ಮಾರಾಟ ಮಾಡಿದ್ದೇವೆ. ಉಳಿದೆಲ್ಲ ನಾವೇ ಇಟ್ಟುಕೊಂಡಿದ್ದೇವೆ. ಕಳಪೆ ಕಾಮಗಾರಿ ಮಾಡುವ ಉದ್ದೇಶ ನಮಗಿರಲಿಲ್ಲ. ಇದರಲ್ಲಿ ಎಂಜಿನಿಯರ್ ತಪ್ಪಿದೆಯೇ ವಿನ: ನಮ್ಮದಲ್ಲ ಎಂದು ಆರೋಪಿಗಳು ಹೇಳಿದರು.

Related Articles

Back to top button