Latest

ಕೋಟೆಕೆರೆ ಶುಲ್ಕ ವಿರೋಧಿಸಿ ಕರವೇ ಧರಣಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ಕೋಟೆ ಕೆರೆಯ ಪ್ರವೇಶಕ್ಕೆ ಸಾರ್ವಜನಿಕರಿಗೆ ಶುಲ್ಕ ವಿಧಿಸಿರುವುದನ್ನು ವಿರೋಧಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು.

ಬೆಳಗಾವಿ ಜಿಲ್ಲಾಡಳಿತ ಈ ಕೂಡಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮವನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಇನ್ನಷ್ಟು ತೀವ್ರಗತಿಯ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಶಿವಾನಂದ ತಂಬಾಕಿ, ವಿನಾಯಕ ಬೋವಿ,ಸುಮೀತ ಅಗಸಗಿ, ಸತೀಶ್ ಗಾಡಿವಡ್ಡರ, ಸಂಪತ್ ಸಕ್ರೇಣ್ಣವರ್, ವಿನಾಯಕ ಹಟ್ಟಿಹೋಳಿ, ಗಿರೀಶ ಪಾಟೀಲ್, ಮಹೇಶ್ ಶಿಗ್ಗಿಹಳ್ಳಿ, ಸಂಪತಕುಮಾರ್ ದೇಸಾಯಿ ಮೊದಲಾದವರಿದ್ದರು.

Home add -Advt

ಜಿಲ್ಲಾಧಿಕಾರಿಗಳ ಈ ಕ್ರಮ ಅವೈಜ್ಞಾನಿಕವಾಗಿದ್ದು, ನಿರ್ಧಾರ ಕೆಬಿಡದಿದ್ದಲ್ಲಿ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಕರವೇ ಯುವ ಘಟಕದ ಅಧ್ಯಕ್ಷ ದೀಪಕ್ ಗುಡಗನಟ್ಟಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

Related Articles

Back to top button