ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ಹಿಂದವಾಡಿಯ ಎಸಿಪಿಆರ್ (ಗುರುದೇವ ರಾನಡೆ ಮಂದಿರ) ದಲ್ಲಿ ಫೆ.೧೬ ರಂದು ಸಂಜೆ ೫ ರಿಂದ ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ವ್ಯಕ್ತಿತ್ವ ವಿಕಸನ ಉಪನ್ಯಾಸ ಆಯೋಜಿಸಲಾಗಿದೆ.
ಗೋಗಟೆ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಡಾ. ಮಧುಮತಿ ಕುಲಕರ್ಣಿ ’ಸಮಯದ ವ್ಯವಸ್ಥಾಪನೆ’ ಹಾಗೂ ’ಮನಸ್ಸಿನ ಮ್ಯಾಪಿಂಗ್’ ಕುರಿತು ಉಪನ್ಯಾಸ ನೀಡಲಿದ್ದಾರೆ.