Karnataka NewsPolitics

*ನದಿ, ಹೊಳೆಗಳಿಗೆ ಇಳಿದರೆ ಹುಷಾರ್: ಬೀಳುತ್ತೆ ಲಾಠಿ ಏಟು*

ಅಧಿಕಾರಿಗಳಿಗೆ ಕಂದಾಯ ಸಚಿವರ ಖಡಕ್ ಸೂಚನೆ

ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಹಲವೆಡೆ ಪ್ರವಾಹವುಂತಾಗಿ ಜನಜೀವನ ಸಂಪೂರ್ನ ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲೂ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನದಿಗಳು, ಸೇತುವೆಗಳು, ಹೊಳೆಗಳಿಗೆ ಇಳಿದು ಹುಚ್ಚಾಟವಾಡುವವರಿಗೆ, ದುಸ್ಸಾಹಸ ಮಾಡುವವರಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಿದೆ.

Home add -Advt

ಅನಗತ್ಯವಾಗಿ ನದಿ, ಹೊಳೆಗಳಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಮಾತನಾಡಿದ ಸಚಿವರು, ಅನಗತ್ಯವಾಗಿ ನದಿಗಳಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸುವಂತೆ ಸೂಚಿಸಿದ್ದೇನೆ ಎಂದರು.

ರಾಜ್ಯದ ಜನತೆ ನಮ್ಮ ಬಗ್ಗೆ ತಪ್ಪು ತಿಳಿದುಕೊಂಡರೂ ಪರವಾಗಿಲ್ಲ, ಅಧಿಕಾರಿಗಳ ಮಾತು ಕೇಳದೇ ನದಿಗಳಿಗೆ ಇಳಿಯುವವರಿಗೆ, ಹಳ್ಳಗಳಿಗೆ ಇಳಿಯುವವರಿಗೆ ಲಾಠಿ ಪ್ರಯೋಗ ಮಾಡುವಂತೆ ಸೂಚಿದ್ದೇನೆ. ಮೀನು ಹಿಡಿಯುವುದು, ಕೃಷಿ ಚಟುವಟಿಕೆ ಎಂದು ನೆಪ ಹೇಳಿ ಇಳಿಯುವುದು, ಸೆಲ್ಫಿಗಾಗಿ ನದಿ ಅಥವಾ ಹೊಳೆಗಳಿಗೆ ಇಳಿಯುವವರ ಮೇಲೆ ಮುಲಾಜಿಲ್ಲದೇ ಲಾಠಿ ಏಟು ನೀಡಿ ಕ್ರಮ ಕೈಗೊಳ್ಳಿ. ನಮ್ಮ ರಾಜ್ಯದಲ್ಲಿ ಪ್ರಾಣಹಾನಿಯಾಗುವುದಕ್ಕೆ ಬಿಡುವುದಿಲ್ಲ. ಒಳ್ಳೆ ಮಾತಿಗೆ ಗೌರವ ಕೊಡಲಿಲ್ಲ ಎಂದರೆ ಲಾಠಿ ಏಟು ಬೀಳುವುದು ನಿಶ್ಚಿತ ಎಂದು ತಿಳಿಸಿದ್ದಾರೆ.

Related Articles

Back to top button