Latest

ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರ
ಸಮೀಪದ ತಿಗಡೊಳ್ಳಿ ಗ್ರಾಮದಲ್ಲಿ ಸುವರ್ಣಗ್ರಾಮ ಯೋಜನೆಯಡಿ ಹೆಚ್ಚುವರಿ ಅನುದಾನದಲ್ಲಿ ಮಂಜೂರಾದ ೯೯ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಮಹಾಂತೇಶ ದೊಡಗೌಡರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮಕ್ಕೆ ಬಂದ ಅಭಿವೃದ್ಧಿ ಯೋಜನೆಗಳನ್ನು ಪಕ್ಷಾತೀತವಾಗಿ ಜಾರಿಗೊಳಿಸುವುದು ಎಲ್ಲರ ಕರ್ತವ್ಯ. ಈಗ ಗ್ರಾಮದಲ್ಲಿ ನಡೆಯುವ ಸಿಸಿ ರಸ್ತೆಯ ಕಾಮಗಾರಿಯನ್ನು ಉತ್ತಮ ಗುಣಮಟ್ಟದ್ದಾಗಿ ಮಾಡಲು ಗುತ್ತಿಗೆದಾರರು ಗಮನಹರಿಸಬೇಕೆಂದು ಹೇಳಿದರು.
ಮಂಡಳ ಉಪಾಧ್ಯಕ್ಷ ಗೋಪಾಲ ಹುಕ್ಕೇರಿ, ಕಿರಣ ಪಾಟೀಲ, ಮಹಾದೇವ ಹತ್ತಿ, ಈರಣ್ಣ ಬಡಿಗೇರ, ಮಂಜುನಾಥ ಹುಬ್ಬಳ್ಳಿ, ಯಲ್ಲಪ್ಪ ಮಡಿವಾಳರ, ಅಜೀತ ಕ್ಯಾತನವರ, ಇಮಾಮ ಶಿರಕೋಳ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button