ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರನ್ನು ವರ್ಗಾಯಿಸಲಾಗಿದೆ.
ಅವರ ಜಾಗಕ್ಕೆ ಇಬ್ರಾಹಿಂ ಸುತಾರ್ ಅವರನ್ನು ನೇಮಿಸಲಾಗಿದೆ. ಕುರೇರ ಅವರಿಗೆ ಸ್ಥಳ ತೋರಿಸಿಲ್ಲ.
ಸ್ವಂತ ಜಿಲ್ಲೆಯಲ್ಲಿರುವ ಮತ್ತು 3 ವರ್ಷದಿಂದ ಅದೇ ಸ್ಥಳದಲ್ಲಿರು ಅಧಿಕಾರಿಗಳನ್ನು ಫೆ. 28ರೊಳಗೆ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.