Belagavi NewsBelgaum NewsKannada NewsKarnataka News

ಜೊಲ್ಲೆ ದಂಪತಿ ಪುತ್ರ, ಉದ್ಯಮಿ ಬಸವಪ್ರಸಾದ ವಿವಾಹ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ದ್ವಿತೀಯ ಪುತ್ರ, ಉದ್ಯಮಿ ಬಸವಪ್ರಸಾದ ಅವರ ವಿವಾಹ ಕಾಕತಿ ಸಮೀಪದ ಜೊಲ್ಲೆಯವರ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆಯಿತು.

ಹುಮನಾಬಾದ್ ನ ವೀರಣ್ಣ ಪಾಟೀಲ ಹಾಗೂ ವಿಜಯಲಕ್ಷ್ಮೀ ಪಾಟೀಲ ಅವರ ಪುತ್ರಿ ಯಶಸ್ವಿನಿ ಅವರ ಜೊತೆ ಬಸವ ಪ್ರಸಾದ ವಿವಾಹ ಜರುಗಿತು.

Home add -Advt

ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವದಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹುಕ್ಕೇರಿ ಕ್ಯಾರಗುಡ್ಡ ಔಜಿಕರ ಆಶ್ರಮದ ಅಭಿನವ ಮಂಜುನಾಥ ಮಹಾರಾಜರು ಸೇರಿದಂತೆ ನೂರಾರು ಜನ ಮಠಾಧೀಶರು ಉಪಸ್ಥಿತರಿದ್ದರು.

ಸಂಜೆ ರಿಸೆಪ್ಶನ್ ಆಯೋಜಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು, ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

Related Articles

Back to top button