Belagavi NewsBelgaum NewsKarnataka News
*ಬೆಳಗಾವಿ: ಯುವ ವಕೀಲ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹೃದಯಾಘಾತದ ಸಾವಿನ ಸರಣಿ ಮುಂದುವರೆದಿದೆ. ಬೆಳಗಾವಿಯಲ್ಲಿ ಯುವ ವಕೀಲರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸುಭಾಷ್ ಮೃತ ವಕೀಲ. ಬೆಳಿಗ್ಗೆ ಹೋಟೆಲ್ ನಲ್ಲಿ ಉಪಹಾರ ಸೇವಿಸಿ ಕೌಂಟರ್ ಬಳಿ ಬಂದಿದ್ದ ಸುಭಾಷ್ ಇದ್ದಕ್ಕಿದ್ದಂತೆ ಸುಸ್ತಾದವಂತೆ ಕಂಡವರು ಬಾಟಲ್ ನಲ್ಲಿದ್ದ ನೀರನ್ನು ಕುಡಿದಿದ್ದಾರೆ. ಸಾವರಿಸಿಕೊಳ್ಳಲು ಯತ್ನಿಸಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.



