Kannada News

ಆದಿ ಶಕ್ತಿ ಶ್ರೀ ಬಿಷ್ಟಾದೇವಿ ಉಡಿ ತುಂಬಿದ ಡಾ.ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಖಾನಾಪುರ : ತಾಲೂಕಿನ ಸುಕ್ಷೇತ್ರ ಎಂದು ಗುರುತಿಸಿ ಕೋಡಿರುವ ಶ್ರೀ ಬಿಷ್ಟಾದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುವ ಖಾನಾಪುರ ತಾಲೂಕಿನ ಬಿಜೆಪಿ ಪ್ರಭಾರಿ, ಬೆಳಗಾವಿ ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ.ಡಾ. ಸೋನಾಲಿ ಸರ್ನೋಬತ್ ಅವರು  ಆದಿ ಶಕ್ತಿ ಶ್ರೀ ಬಿಷ್ಟಾದೇವಿ” ಉಡಿ ತುಂಬಿ” ಕ್ಷೇತ್ರದ ಜನತೆಗೆ ಆರೋಗ್ಯ ಆಯುಷ್ಯ ನೀಡಲಿ ಎಂದು ಬೇಡಿಕೊಂಡರು.

 

ನಂತರ ಶ್ರೀ ಬಿಷ್ಟಾದೇವಿ ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ  ಕಾರ್ತಿಕ ಅಂಬೋಜಿ ಅವರು ಡಾ:ಸೋನಾಲಿ ಸರ್ನೋಬತ್ ಅವರಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಸಂತೋಷ ಕುಕ್ಕಡೊಳ್ಳಿ. ಎಸ್ ವಾಯ್ ಪಾಟೀಲ್. ಬಿಜೆಪಿ ಕಾರ್ಯಕರ್ತರು ಹಾಗೂ ಸೋನಾಲಿ ತಾಯಿ ಅಭಿಮಾನಿ ಬಳಗದ ಯುವಕರು ಉಪಸ್ಥಿತರಿದ್ದರು.

ಬೆಳಗಾವಿಗೆ ಬುಧವಾರ ಗೋಪಾಲಜೀ

https://pragati.taskdun.com/religion/gopalji-will-visit-belgaum-on-wednesday/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button