
– ಅಶ್ವಿನಿ ಎಸ್ ಅಂಗಡಿ, ಬದಾಮಿ
ನಮ್ಮ ಈ ಸಮಾಜದಲ್ಲಿ ಹೆಣ್ಣುಮಕ್ಕಳೆಂದರೆ ಬರೀ ಜೀವನದ ಹೊಂದಾಣಿಕೆಗಾಗಿ ಹುಟ್ಟಿ ಬಂದವರಾಗಿದ್ದಾರೆ, ಪ್ರತಿಯೊಂದು ರಂಗದಲ್ಲೂ ಅವರಿಗೆ ಸಮಾನವಾದ ಸ್ಥಾನ,ಮಾನ ನೀಡಿದ್ದರೂ ಕಾನೂನಾತ್ಮಕ ರಕ್ಷಣೆ ಒದಗಿಸಿದ್ದರೂ ಅವು ಯಾವವೂ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲವೆಂಬುದು ವಿಪರ್ಯಾಸವೇ ಸರಿ.
ಯಶಸ್ವಿ ಪುರುಷನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ ಎಂದು ಹೇಳುತ್ತಾರೆ, ಹಾಗೆಯೇ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷನಿದ್ದರೆ ಮೌಲ್ಯಯುತ ಸಮಾಜ ನಿರ್ಮಾಣವಾಗುವುದು ಕಷ್ಟ ಸಾಧ್ಯವೇನಲ್ಲ.
ಕಾವ್ಯ ಹಾಗೂ ಕಿರಣ ಅವಳಿ ಮಕ್ಕಳು, ಮಕ್ಕಳಲ್ಲಿ ಒಂದೇ ಸ್ವಭಾವ ,ಒಂದೇ ಜ್ಞಾನ, ಒಂದೇ ಅಭಿರುಚಿ ಹಾಗೂ ಒಂದೇ ಆಸಕ್ತಿ ,ಆದರೆ ಪಾಲಕರು ಕಿರಣ ಏಳ್ಗೆಯ ಬಗ್ಗೆ ಹೆಚ್ಚಿನ ಕಾಳಜೀವಹಿಸುತ್ತಾರೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಗನನ್ನು ಬೇರೆ ರಾಜ್ಯ,ರಾಷ್ಟ್ರಗಳಿಗೆ ಕಳಿಸುತ್ತಾರೆ ಅದೇ ಮಗಳನ್ನು ಸಂಕುಚಿತ ಭಾವನೆಯಿಂದಾ ನೋಡುತ್ತಾರೆ ಅವಳಿಗೆ ನೂರಾರು ಕಟ್ಟಳೆಗಳನ್ನು ಹಾಕುತ್ತಾರೆ, ಅವಳ ಆಸಕ್ತಿಯನುಸಾರವಾಗಿ ಯಾವ ಕಾರ್ಯವನ್ನು ಪಾಲಕರು ಮಾಡುವುದಿಲ್ಲ. ಕಾವ್ಯಾಳ ಓದನ್ನು ಅರ್ಧಕ್ಕೆ ನಿಲ್ಲಿಸಿ ಮದುವೆ ಮಾಡಿ ಕೊಡುತ್ತಾರೆ.
ಇತ್ತೀಚೆಗೆ ಮಹಿಳೆಯರು ಸ್ವಯಂ ಉದ್ಯೋಗಕ್ಕಾಗಿ ಬೇರೆ ಬೇರೆ ಪಟ್ಟಣಗಳಿಗೆ ಹೋಗಬೇಕಾದರೆ ಸಮಾಜವು ಅವಳಿಗೆ ಸಾಕಷ್ಟು ಚುಚ್ಚು ಮಾತುಗಳಿಂದ ನಿಂದಿಸುತ್ತೆ ಆವಾಗಲೂ ಆಕೆ ಸಹಿಸಿಕೊಂಡು, ಮುನ್ನಡೆಯಬೇಕಾಗುತ್ತದೆ ಜೊತೆಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಗಳು ಬೇರೆ, ಅವಳ ಆತ್ಮ ಸ್ಥೈರ್ಯವನ್ನು ಹಾಳು ಮಾಡುವುದಾಗಿದೆ. ಅಸಹಜ ನೋಟ, ಅಸಹಜ ಸ್ಪರ್ಶ, ಮತ್ತು ಅಸಹಜ ನಡೆ,ನುಡಿ ಇವೆಲ್ಲವನ್ನು ಅವಳು ಸಹಿಸಿಕೊಂಡು ಸಿಡಿದೇಳದೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತೆ. ಇಲ್ಲ ಎಂದರೆ ತನ್ನನ್ನೇ ನಂಬಿರುವ ಕುಟುಂಬ ಬೀದಿ ಪಾಲಾಗುವ ಸಂಭವವಿರುತ್ತದೆ.
ಇಂತಹ ಎಷ್ಟೋ ಕಾರಣಗಳಿಂದ ಮಹಿಳೆಯರು ಕೆಲಸವನ್ನು ಬಿಡಲಾರದೆ ಕಷ್ಟವನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಪ್ರೀತಿಸಿ ಮೋಸ ಹೋಗಿ ಬರ್ಬರವಾಗಿ ಹತ್ಯೆ ಯಾಗುವ ಸಾಕಷ್ಟು ಉದಾಹರಣೆಗಳನ್ನಿಂದು ನಾವು ಕಾಣಬಹುದಾಗಿದೆ. ಮಾನ ಮರ್ಯಾದೆಗೆ ಅಂಜಿ ಸಮಾಜದ ಟೀಕೆಗಳನ್ನು ಎದುರಿಸದೆ ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದಾರೆ.
ಮಾಲಾ ಮಧ್ಯಮ ಕುಟುಂಬದ ಹೆಣ್ಣುಮಗಳು ತುಂಬಾ ನಯ, ವಿನಯದಿಂದ ಬೆಳೆದವಳು ಜೊತೆಗೆ ತುಂಬು ಕುಟುಂಬದಲ್ಲಿ ಇವಳೆ ದೊಡ್ಡ ಮಗಳು ಹಾಗಾಗಿ ವಿದ್ಯಾಭ್ಯಾಸ ಅರ್ಧಕ್ಕೆ ಮುಗಿಸಿ,ಉದ್ಯೋಗಕ್ಕಾಗಿ ನಗರ ಸೇರಿದಳು ಕೆಲಸವೇನೋ ಸಿಕ್ಕಾಯಿತು ,ಆದರೆ ಅಲ್ಲಿಯ ಮಾಲೀಕ ಅವಳನ್ನು ಲೈಂಗಿಕವಾಗಿ ಪೀಡಿಸುತ್ತಿದ್ದ ಇದು ಅವಳ ಇಚ್ಛೆಗೆ ವಿರುದ್ಧವಾಗಿತ್ತು. ಎಷ್ಟು ವಿರೋಧಿಸಿದರು, ಮಾಲೀಕ ತನ್ನ ಹಠ ಬಿಡಲಿಲ್ಲ ಇದರಿಂದ ಕೆಲಸ ಕಳೆದು ಕೊಳ್ಳುವ ಪರಿಸ್ಥಿತಿ ಅವಳಿಗೆ ಎದುರಾಯಿತು.ಆ ಕಂಪನಿಯನ್ನು ಬಿಟ್ಟು ಬೇರೆಯಲ್ಲಾ ಕಂಪನಿ ಹುಡುಕಿದರೂ ಒಂದಲ್ಲಾ ಒಂದು ಕಿರುಕುಳ ಅವಳನ್ನು ಭಾಧಿಸುತ್ತಿತ್ತು.ಇದರಿಂದ ರೋಸಿ ಹೋದ ಮಾಲಾ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಳು.
ಇನ್ನು ಪಾಲಕರು ಹೆಣ್ಣು ಮಕ್ಕಳು ಹುಟ್ಟಿದರೆ ಮುಗಿದೆ ಹೋಯಿತು ಅವರನ್ನು ಬೇಗಾ ಮದುವೆ ಮಾಡಿಕೊಟ್ಟು ತಮ್ಮ ತಲೆಯ ಮೇಲಿನ ಭಾರ ಇಳಿಸಿಕೊಳ್ಳುವ ಆತುರದಲ್ಲೇ ಯಾವಾಗಲೂ ಇರುತ್ತಾರೆ,ಅವಳ ವಿದ್ಯಾಭ್ಯಾಸ ಮೊಟಕುಗೊಳಿಸಿ ,ಒಳ್ಳೆಯ ವರ ಬಂದಿತು ಎಂದು ಸಾಲ ಸೋಲಾ ಮಾಡಿ ಮದುವೆಗೆ ಮುಂದಾಗುತ್ತಾರೆ ಆ ಹೆಣ್ಣು ಇಲ್ಲಿಯೂ ಹೊಂದಾಣಿಕೆ ಮಾಡಿಕೊಂಡು ತನ್ನ ಆಸೆ ಆಕಾಂಕ್ಷೆಗಳನ್ನು ಬಲಿ ಕೊಟ್ಟು ತನ್ನ ಸಂಬಂಧಿಗಳು ಹೇಳಿದನ್ನು ಪಾಲಿಸುತ್ತಾಳೆ. ಮುಂದೆ ಮದುವೆ ಆಯಿತೆಂದರೆ ಮುಗಿಯಿತು ಅವಳ ಸ್ವಾತಂತ್ರವು ಅವಳ ಬಿಟ್ಟು ದೂರ ಓಡುತ್ತದೆ, ಏಕೆಂದರೆ ಅವಳು ಗಂಡನ ಮನೆಯ ಅಜ್ಞಾಪಾಲಕಿಯಾಗಿರುತ್ತಾಳೆ ಅತ್ತೆ , ಮಾವ, ಭಾವ,ಮೈದುನರಿಗಂಜಿ ನಡೆಯಬೇಕು ಎಲ್ಲರೊಂದಿಗೆ ಹೊಂದಾಣಿಕೆ ಬೈಗುಳ, ಅವಮಾನ,ದೈಹಿಕ ಹಿಂಸೆ ಯಲ್ಲವೂ ಅಲ್ಲಿ ಮಾಮೂಲಿ, ಎಲ್ಲವನ್ನು ಸಹಿಸಿಕೊಂಡು ಹೊಂದಾಣಿಕೆಯಿಂದ ಜೀವನ ಮಾಡಬೇಕು. ಇನ್ನು ಮಕ್ಕಳು ದೊಡವರಾದ ಮೇಲೆ ಅವರಿಗೂ ಅಂಜಿ ನಡೆಯಬೇಕು ಹೆಣ್ಣು ,ಮಕ್ಕಳಿಗೆ ನೋವಾದಿತಲ್ಲ ಎಂಬ ಮಮತೆಯನ್ನು ಹೊದ್ದುಕೊಂಡು ತನ್ನ ಕಷ್ಟವನ್ನಲ್ಲಾ ಗುಪ್ತಗಾಮಿನಿಯಂತೆ ಕಣ್ಣೀರಿನ ಮೂಲಕ ಹರಿಸುತ್ತಾಳೆ.
“ಯತ್ರ ನಾರ್ಯಂತು ಪೂಜ್ಯಸ್ತೇ ರಮಂತೇ ತತ್ರ ದೇವತಃ” ಎಂದು ಹೇಳುವರು ಈಗಿನ ಸಮಾಜದಲ್ಲಿ ನಾರಿಯಯನ್ನು ಪೂಜ್ಯತಾ ಭಾವನೆಯಿಂದ ನೋಡುವುದು ಬಿಡಿ ,ಸಣ್ಣ ಗೌರವವನ್ನು ನೀಡುವುದಿಲ್ಲಾ ಹೀಗಾದಲ್ಲಿ ನಮ್ಮ ನಾಡಿನ ಸಂಸ್ಕೃತಿ ಹೇಗೆ ತಾನೇ ಬೆಳೆಯಲು ಸಾಧ್ಯ,ಹುಟ್ಟಿದ ಹಸುಳೆಯಿಂದ ಹಿಡಿದು ವೃದ್ಧೆಯರವರೆಗಿನವರು ಒಂದಲ್ಲ ಒಂದು ಕಿರುಕುಳ ವನ್ನು ಅನುಭವಿಸಿರುತ್ತಾರೆ.ಬೇಡಾ ಸಹೋದರರೆ, ಇಂತಹ ಅಮಾನವೀಯ ಕೃತ್ಯಗಳಿಂದ ಹೆಣ್ಣು ಜೀವವನ್ನು ನರಳಿಸ ಬೇಡಿ, ಜಗತ್ತಿನಲ್ಲಿ ನಮ್ಮ ಭಾರತವು ಸುಸಂಸ್ಕೃತ, ಸುಸಂಪ್ರದಾಯ, ಹಾಗೂ ಮೌಲ್ಯಭರಿತ ರಾಷ್ಟ್ರವಾಗಿದೆ .ನಾವು ಒಳ್ಳೆಯ ನೈತಿಕ ಮೌಲ್ಯದಿಂದ ಜೀವನ ನಡೆಸಿ ನಮ್ಮ ದೇಶದ ಏಳ್ಗೆಗಾಗಿ ಶ್ರಮಿಸೋಣ.
ಗಾಂಧೀಜಿ ಯವರ ಕನಸು ಕಮರಿ ಹೋಗಲು ಬಿಡದೆ ಉತ್ತಮ ಸಮಾಜ ನಿರ್ಮಾಣ ಮಾಡಿ ನನಸುಮಾಡುವಲ್ಲಿ ಮುಂದಾಗೋಣ ಮಹಿಳೆಯರ ಸ್ವಾತಂತ್ರ್ಯ ಹರಣ ಮಾಡದೆ ಅವರಿಗೂ ಸ್ವಾಭಿಮಾನದಿಂದ ಬದುಕುವ ಅವಕಾಶ ಮಾಡಿಕೊಡೋಣ….
*ಮಹದಾಯಿ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಸಿಎಂ ಬಸವರಾಜ ಬೊಮ್ಮಾಯಿ*
https://pragati.taskdun.com/mahadai-issuecm-basavaraj-bommaireaction/
*ಬಾಲಕನ ತಲೆಯನ್ನು ರಸ್ತೆಗೆ ಅಪ್ಪಳಿಸಿ ಕೊಂದ ಕಿರಾತಕ*
https://pragati.taskdun.com/boy-walking-on-street-in-humanly-killed-by-young-man/