Kannada NewsKarnataka NewsLatest

ರೊಟರಿ ಕ್ಲಬ್ ಬೆಳಗಾವಿ ದಕ್ಷಿಣ ಪದಗ್ರಹಣ ಸಮಾರಂಭ

ಆನಂದ ಆರ್. ಬುಖೆಬಾಗ್

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ರೋಟರಿ ಸಂಸ್ಥೆ ಬೆಳಗಾವಿ ದಕ್ಷಿಣ 2019-20ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ  ಭಾನುವಾರ  ಮುಂಜಾನೆ 10.30ಕ್ಕೆ  ಗಂಟೆಗೆ ಶಾಂತಾಯಿ ವೃದ್ಧಾಶ್ರಮದಲ್ಲಿ ಜರುಗಲಿದೆ.

ರೊಟರಿ ಜಿಲ್ಲೆ3170 ನಿಕಟ ಪೂರ್ವ ಪ್ರಾಂತಪಾಲರು ಹಾಗೂ ಪ್ರಸ್ತುತ ರೊಟರಿ ಫೌಂಡೆಶನ್ ಪ್ರಾಂತೀಯ ಸಂಚಾಲಕರಾದ  ಅವಿನಾಶ ಪೋತದಾರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಸಹಾಯಕ ಪ್ರಾಂತಪಾಲ  ವೀರ ಧವಲ್ ಉಪಾಧ್ಯ ಅವರು ಉಪಸ್ಥಿತರಿರುವರು.

ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ. ಜಯಸಿಂಹ, ಕೆನರಾ ಬ್ಯಾಂಕ್ ನಿವೃತ್ತ ಪ್ರಬಂಧಕ  ಸಿದ್ಧರಾಯ ಸಾಯಗಾವಿ,  ಯುನಿಯನ್ ಬ್ಯಾಂಕಿನ ಅಧಿಕಾರಿ ಆನಂದ ಆರ್. ಬುಖೆಬಾಗ್ ಇವರು  ಕ್ರಮವಾಗಿ  ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿಗಳಾಗಿ ಅಧಿಕಾರ ವಹಿಸಿಕೊಳ್ಳುವರು.  

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button