Latest

ಅಂಕೋಲಾ, ಭಟ್ಕಳದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಶಿರಸಿ: ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರ ಕೋರಿಕೆಯ ಮೇರೆಗೆ ಅಂಕೋಲಾ ಹಾಗೂ ಭಟ್ಕಳ ನಿಲ್ದಾಣಗಳಲ್ಲಿ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಅನುಮತಿ ನೀಡಿದೆ.

ಅಂಕೋಲಾ ನಿಲ್ದಾಣದಲ್ಲಿ ನಾಳೆ(ಮಾ.9)ಯಿಂದ ಕೊಚುವೆಲಿ- ಮುಂಬೈ ಎಕ್ಸ್ ಪ್ರೆಸ್ ರೈಲು ನಿಲುಗಡೆಯಾಗಲಿದೆ. ಭಟ್ಕಳ ನಿಲ್ದಾಣದಲ್ಲಿ ತಿರುವಂತನಪುರ-ಪನವೇಲ್ ನೇತ್ರಾವತಿ ಎಕ್ಸ್ ಪ್ರೆಸ್ ರೈಲು ನಿಲುಗಡೆಯಾಗಲಿದೆ.

ಈ ಮೂಲಕ ಅಂಕೋಲಾ‌ ಹಾಗೂ ಭಟ್ಕಳ ಭಾಗದ ಜನರ ದೀರ್ಘ ಕಾಲದ ಬೇಡಿಕೆಯನ್ನು ರೈಲ್ವೆ ಇಲಾಖೆ ಈಡೇರಿಸಿದಂತಾಗಿದೆ. ಈ ರೈಲುಗಳ ನಿಲುಗಡೆಗಾಗಿ ಈ ಹಿಂದೆ ಜನ ಮನವಿ ಮಾಡಿಕೊಂಡಿದ್ದ ಮೇರೆಗೆ ಅನಂತಕುಮಾರ ಹೆಗಡೆ ಅವರು ಬೇಡಿಕೆ ಈಡೇರಿಸಲು ಕೋರಿ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದರು. ಈ ರೈಲುಗಳ ನಿಲುಗಡೆಯಿಂದ ಕೇರಳ ಹಾಗೂ ಮುಂಬೈ ಕಡೆ ಹೋಗುವ ಹಾಗೂ ಬರುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಅದೇ ರೀತಿ ಹಿಸ್ಸಾರ್-ಕೊಯಿಮತ್ತೂರು ರೈಲಿಗೆ ಕುಮಟಾದಲ್ಲಿ ನಿಲುಗಡೆ ಕುರಿತ ಆದೇಶ ಸದ್ಯವೇ ಹೊರಡುವ ನಿರೀಕ್ಷೆ ಇದೆ ಎಂದು ಸಂಸದರ ಅನಂತ ಕುಮಾರ್‌ ಹೆಗಡೆ ಕಚೇರಿ ಪ್ರಕಟಣೆ ತಿಳಿಸಿದೆ.

https://pragati.taskdun.com/a-woman-tried-to-commit-suicide-by-drinking-phenol-to-her-three-children-in-the-premises-of-the-district-collectors-office/

https://pragati.taskdun.com/belgaum-kidney-check-up-camp-tomorrow/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button