Kannada NewsKarnataka News

ಸುನೀಲ ಪಾಟೀಲ ಹಾಗೂ ಬೆಂಬಲಿಗರು ಬಿಜೆಪಿಗೆ



ಸುನೀಲ ಪಾಟೀಲ ಸೇರ್ಪಡೆ ಪಕ್ಷಕ್ಕೆ ಬಲ ತುಂಬಿದೆ – ಸಚಿವೆ ಶಶಿಕಲಾ ಜೊಲ್ಲೆ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ ಹಾಗೂ ಅವರ ಅಪಾರ ಬೆಂಬಲಿಗರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ಪಕ್ಷದ ಅಭಿವೃದ್ಧಿಪರ ಯೋಜನೆಗಳು ಕ್ಷೇತ್ರದಲ್ಲಿ ಮೂಲೆಮೂಲೆಗೂ ತಲುಪಿಸಿದ್ದು ನನ್ನ ಹ್ಯಾಟ್ರಿಕ್ ವಿಜಯಕ್ಕೆ ಶ್ರೀರಕ್ಷೆಯಾಗಲಿದೆ’ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇಲ್ಲಿನ ಮಹಾದೇವ ಗಲ್ಲಿಯ ಮಹಾದೇವ ಮಂದಿರದ ಬಳಿ ಬುಧವಾರ ಜರುಗಿದ ಸ್ಥಳೀಯ ಹಾಲಿ ಮತ್ತು ಮಾಜಿ ನಗರಸಭೆ ಸದಸ್ಯರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಸದಸ್ಯರನ್ನು ಹಾಗೂ ಅವರ ನೂರಾರು ಬೆಂಬಲಿಗರನ್ನು ಸ್ವಾಗತಿಸಿ ಅವರು ಮಾತನಾಡಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ’ಸುನೀಲ ಪಾಟೀಲ ಅವರು ಓರ್ವ ಧೀರ ವ್ಯಕ್ತಿತ್ವದ ನಾಯಕ. ಅವರು ನಮ್ಮೊಂದಿಗೆ ಬಂದಿದ್ದರಿಂದ ನಗರದ ಅಭಿವೃದ್ಧಿಯಲ್ಲಿ ಮತ್ತಷ್ಟು ಸಹಕಾರಿಯಾಗಲಿದೆ’ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್, ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ ಮಾತನಾಡಿ ’ಸುನೀಲ ಪಾಟೀಲ ಪಕ್ಷದಲ್ಲಿ ಸೇರ್ಪಡೆಯಿಂದ ಪಕ್ಷದಲ್ಲಿ ಒಂದು ಹೊಸ ಉತ್ಸಾಹ ಸಂಚರಿಸಿದೆ’ ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ ಮಾತನಾಡಿ ’ಜೊಲ್ಲೆ ದಂಪತಿ ನೇತೃತ್ವ ಕ್ಷೇತ್ರಕ್ಕೆ ಒಂದು ವರದಾನವಾಗಿ ಪರಿಣಮಿಸಿದೆ. ಇಂತಹ ನೇತೃತ್ವದೊಂದಿಗಿದ್ದು ಜನತೆ ಸೇವೆ ಮಾಡುವ ಇಚ್ಛೆ ಬಹುದಿನಗಳಿದ ಇತ್ತು. ಆದರೆ ಯೋಗ ಕೂಡಿ ಬಂದಿದ್ದಿಲ್ಲ. ಆದರೆ ಅದು ಇಂದು ಕೂಡಿ ಬಂದಿದ್ದು ಸಚಿವೆ ಜೊಲ್ಲೆಯವರನ್ನು ಚುನಾವಣೆಯಲ್ಲಿ ಹ್ಯಾಟ್ರಿಕ್ ವಿಜಯದೊಂದಿಗೆ ಬಹುಮತಗಳಿಂದ ಚುನಾಯಿಸಿ ತರಲು ಶ್ರಮಿಸಲಾಗುವುದು’ ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ ನೇತೃತ್ವದಲ್ಲಿ ಹಾಲಿ ಸದಸ್ಯೆ ಗೀತಾ ಪಾಟೀಲ, ಮಾಜಿ ಸದಸ್ಯ ರವಿ ಚಂದ್ರಕುಡೆ, ಸಂಜಯ ಮೊಳವಾಡೆ, ರವಿಂದ್ರ ಕೋಠಿವಾಲೆ, ಮಲ್ಲಿಕಾರ್ಜುನ ಗಡಕರಿ, ಡಾ. ಮಹೇಶ ಐನಾಪುರೆ, ಸಚಿನ ಜಾಧವ, ಅಮೋಲ ಚಂದ್ರಕುಡೆ, ಪ್ರಮೋದ ಪನದೆ, ನಿತೀನ ಗುರವ, ಮೊದಲಾದವರು ಸೇರಿದಂತೆ ಮಹಾದೇವ ಗಲ್ಲಿ ಹಾಗೂ ಪರಿಸರದ ನೂರಾರು ಪುರುಷ ಹಾಗೂ ಮಹಿಳಾ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸಭಾಪತಿ ರಾಜೇಂದ್ರ ಗುಂದೇಶಾ, ಮಹಾಲಿಂಗೇಶ ಕೋಠಿವಾಲೆ, ಪಪ್ಪು ಪಾಟೀಲ, ಸುರೇಶ ಶೆಟ್ಟಿ, ವಜ್ರಕಾಂತ ಸದಲಗೆ, ರವಿಂದ್ರ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

https://pragati.taskdun.com/vidhanasabha-electionnippanishashikala-jollechitra-wagha/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button