Latest
ಮತ್ತಿಬ್ಬರು ಶಾಸಕರ ರಾಜಿನಾಮೆ: 16ಕ್ಕೆ ತಲುಪಿತು ಅತೃಪ್ತರ ಸಂಖ್ಯೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಕಾಂಗ್ರೆಸ್ ಪಕ್ಷದ ಮತ್ತಿಬ್ಬರು ಶಾಸಕರು ಬುಧವಾರ ರಾಜಿನಾಮೆ ಸಲ್ಲಿಸಿದ್ದಾರೆ.
ಎಂಟಿಬಿ ನಾಗರಾಜ ಮತ್ತು ಸುಧಾಕರ ತಮ್ಮ ಶಾಸಕತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಸ್ಪೀಕರ್ ಕಚೇರಿಗೆ ಆಗಮಿಲಿದ ಅವರು ರಾಜಿನಾಮೆ ಸಲ್ಲಿಸಿ ತೆರಳಿದ್ದಾರೆ. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದರಿಂದಾಗಿ ರಾಜಿನಾಮೆ ಸಲ್ಲಿಸಿದವರ ಸಂಖ್ಯೆ 16ಕ್ಕೆ ಏರಿದಂತಾಗಿದೆ. ಈ ಸಂಖ್ಯೆ 22ಕ್ಕೇರುವ ಸಾಧ್ಯತೆ ಇದ್ದು, ಸ್ಪೀಕರ್ ವಿಳಂಬ ಮಾಡುತ್ತಿರುವುದರಿಂದ ಕೆಲವರು ಕಾಯುತ್ತಿದ್ದಾರೆನ್ನಲಾಗಿದೆ.
22ಕ್ಕೇರಲಿದೆಯೇ ರಾಜಿನಾಮೆ ಶಾಸಕರ ಸಂಖ್ಯೆ?




