Kannada NewsKarnataka NewsLatest

ಶಿರಸಿ TSS ಚುನಾವಣೆ ಫಲಿತಾಂಶ: ಕಡವೆ ಬಣಕ್ಕೆ ಹೀನಾಯ ಸೋಲು; ಗೋಪಾಲಕೃಷ್ಣ ವೈದ್ಯ ಅಧ್ಯಕ್ಷರಾಗುವುದು ಖಚಿತ

ಪ್ರಗತಿವಾಹಿನಿ ಸುದ್ದಿ, ಶಿರಸಿ: ಶಿರಸಿಯ ಪ್ರತಿಷ್ಠಿತ ತೋಟಗಾರ್ಸ್ ಸೇಲ್ ಸೊಸೈಟಿ ( TSS) ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಡವೆ ಬಣಕ್ಕೆ ಹೀನಾಯ ಸೋಲುಂಟಾಗಿದೆ.

ಗೋಪಾಲಕೃಷ್ಣ ವೈದ್ಯ ಬಣ ಭರ್ಜರಿ ಜಯ ಸಾಧಿಸಿದ್ದು, ವೈದ್ಯ ಮುಂದಿನ ಅಧ್ಯಕ್ಷರಾಗುವುದು ಖಚಿತವಾಗಿದೆ.

ಒಟ್ಟೂ 15 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಮಧ್ಯರಾತ್ರಿಯವರೆಗೂ ಮತ ಎಣಿಕೆ ಮುಂದುವರಿದಿತ್ತು. 14 ಸ್ಥಾನಗಳಲ್ಲಿ ವೈದ್ಯ ಬಣ ಮುನ್ನಡೆ ಸಾಧಿಸಿದೆ. ಕೇವಲ ಒಂದು ಸ್ಥಾನದಲ್ಲಿ ಮಾತ್ರ ಕಡವೆ ಬಣ ಮುಂದಿತ್ತು.

4 ಪ್ರಾಥಮಿಕ ಸಹಕಾರಿ ಸಂಘದ ಪ್ರತಿನಿಧಿ ಸ್ಥಾನ ಮತ್ತು ಎರಡು ಮಹಿಳಾ ಸ್ಥಾನಗಳಲ್ಲೂ ವೈದ್ಯರಣ ಬಣ ಗೆಲುವು ಸಾಧಿಸಿದೆ. 7 ಸಾಮಾನ್ಯ ಸ್ಥಾನಗಳ ಪೈಕಿ 6ರಲ್ಲಿ ವೈದ್ಯರ ಗುಂಪು ಮುನ್ನಡೆಯಲ್ಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button