Kannada NewsKarnataka News

ಗ್ರಾಮ ಪಂಚಾಯತ್ ಸದಸ್ಯನ ಬರ್ಬರ ಕೊಲೆ

ಪ್ರಗತಿವಾಹಿನಿ ಸುದ್ದಿ: ಹಳೆಯ ದ್ವೇಷದ ಹಿನ್ನೆಲೆ ಗ್ರಾಮ ಪಂಚಾಯತಿ ಸದಸ್ಯನನ್ನು ಲಾಂಗು ಮುಚ್ಚುಗಳಿಂದ ಕೊಚ್ಚಿ ಬರ್ಭರವಾಗಿ ಕೊಲೆ ಮಾಡಿರುವ ಘಟನೆ ಹೊಸಕೋಟೆ  ತಾಲ್ಲೂಕಿನ ನಂದಗುಡಿ ಹೋಬಳಿಯ ನರಸಾಪುರ ಗ್ರಾಮದಲ್ಲಿ  ನಡೆದಿದೆ. 

ಬೈಲ್ ನರಸಾಪುರ ಗ್ರಾಮ ಪಂಚಾಯತಿ ಸದಸ್ಯನ ಭೀಕರ ಕೊಲೆಯಾಗಿದ್ದು, ಗ್ರಾಮ ಪಂಚಾಯತಿ ಕಚೇರಿ ಬಳಿಯೇ ಲಾಂಗು ಮಚ್ಚುಗಳಿಂದ ಅಪಾಕ್ ಅಮೀರ್ ಖಾನ್ (45 ವರ್ಷ) ಅವರನ್ನು ಕೊಲೆ ಮಾಡಲಾಗಿದೆ.‌

ನೆನ್ನೆ ತಡರಾತ್ರಿ ಈ ಘಟನೆ ನಡೆದಿದೆ ಎನ್ನಾಲಾಗಿದೆ.‌ ರಕ್ತದ ಮಡುವಿನಲ್ಲಿ ಇದ್ದ ವ್ಯಕ್ತಿಯನ್ನು ಸಮೀಪದ MVJ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವಿಗಿಡಾಗಿದ್ದಾರೆ.‌ ಪೋನ್ ನಲ್ಲಿ ಮಾತನಾಡುತ್ತಿದ್ದಾಗ ಇದೇ ಗ್ರಾಮದ ಮೆಹಬೂಬ್ ಮತ್ತು ತನ್ನ ಸ್ನೇಹಿತರೊಡನೆ ಬಂದು ಏಕಾಏಕಿ ದಾಳಿ ಮಾಡಿ, ಎಸ್ಕೇಪ್ ಆಗಿದ್ದಾರೆ. 

ಘಟನಾ  ಸ್ಥಳಕ್ಕೆ ನಂದಗುಡಿ ಪೋಲಿಸರು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂವಿಜೆ ಅಸ್ವತ್ರೆಗೆ ರವಾನೆ ಮಾಡಲಾಗಿದೆ. 

Home add -Advt

Related Articles

Back to top button