Karnataka NewsLatest

*ಮತ್ತೆ 14 ರೈಲುಗಳ ಸಂಚಾರ ರದ್ದು; ಟ್ರ‍ೇನ್ ಬಂದ್ ಬೆನ್ನಲ್ಲೇ ಪ್ರಯಾಣಿಕರಿಗೆ ಮತ್ತೊಂದು ಶಾಕ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ವರುಣಾರ್ಭಟದಿಂದಾಗಿ ಹಲವೆಡೆ ಭೂ ಕುಸಿತ, ಗುಡ್ಡ ಕುಸಿತ ಅವಘಡಗಳು ಸಂಭವಿಸಿದ್ದು, ಅನೇಕ ಕಡೆಗಳಲ್ಲಿ ರೈಲು ಹಳಿಗಳ ಮೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ಅವಾಂತರಗಳು ಸೃಷ್ಟಿಯಾಗಿವೆ.

ಕರಾವಳಿ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಭಾರಿ ಸಮಸ್ಯೆ ಎದುರಾಗುತ್ತಿದ್ದು, ಈ ನಡುವೆ ರೈಲ್ವೆ ಇಲಾಖೆ ಮತ್ತೆ 14 ರೈಲುಗಳನ್ನು ರದ್ದುಗೊಳಿಸಿದೆ. ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಚಲಿಸುವ ರೈಲುಗಳು ರದ್ದಾಗಿದ್ದು, ಪ್ರಯಾಣಿಕರು ಬಸ್ ಗಳಲ್ಲಿ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Home add -Advt

ರೈಲುಗಳು ರದ್ದಾದ ಬೆನ್ನಲ್ಲೇ ಖಾಸಗಿ ಬಸ್ ಗಳು ಟಿಕೆಟ್ ದರವನ್ನು ಮನಸೋ ಇಚ್ಛೆ ಎರಡು ಮೂರು ಪಟ್ಟು ಏರಿಸಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಇದ್ದ ಖಾಸಗಿ ಬಸ್ ಪ್ರಯಾಣ ದರ 500 ರೂ, 600 ರೂ ಇದ್ದಿದ್ದು, ಏಕಾಏಕಿ 1000 ರೂ, 1200 ರೂ ಆಗಿದೆ.

ಅಲ್ಲದೇ ಎಸಿ ಬಸ್ ಗಳ ಪ್ರಯಾಣದರ 2000 ರೂಪಾಯಿಯಿಂದ 4000 ರೂಪಾಯಿಗೆ ಏರಿಕೆಯಾಗಿದೆ. ಇದೇ ವೇಳೆ ವಿಮಾನ ಪ್ರಯಾಣ ದರವೂ ದುಪ್ಪಟ್ಟಾಗಿದ್ದು, ಪ್ರಯಾಣಿಕರು ಪರಿತಪಿಸುವಂತಾಗಿದೆ.

Related Articles

Back to top button