Kannada NewsKarnataka NewsLatest

ಅಲೌಕಿಕ ಧ್ಯಾನ ಮಂದಿರ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಹಿಮಾಲಯದಲ್ಲಿ ಅನೇಕ ವರ್ಷಗಳ ಕಾಲ ತಪಸ್ಸು ಮಾಡಿ ಬಂದಿರುವ ಶ್ರೀ ಶಿವಾನಂದ ಗುರೂಜಿ ಅವರು ಬೆಳಗಾವಿ ಸಮೀಪದ ನೀಲಜಿ ಗ್ರಾಮದಲ್ಲಿ ಎರಡುವರೆ ಎಕರೆ ಪ್ರದೇಶದಲ್ಲಿ ಅಲೌಕಿಕ ಧ್ಯಾನ ಮಂದಿರ ಸ್ಥಾಪಿಸಿದ್ದಾರೆ. ಈ ಮಂದಿರದ ಲೋಕಾರ್ಪಣೆ ಇಂದು ಜರುಗಿತು.
೩೫ಕ್ಕೂ ಹೆಚ್ಚು ದೇಶಿಯ ಆಕಳುಗಳನ್ನು ಆಶ್ರಮದಲ್ಲಿ ಸಾಕಿದ್ದಾರೆ. ಸಾವಯವ ಕೃಷಿ ಮಾಡಿ ರಾಸಾಯನಿಕ ಬಳಕೆ ಮಾಡದೆ ಬೆಳೆ ಬೆಳೆದು ಬಂದ ಭಕ್ತರಿಗೆ ನೀಡುತ್ತಾರೆ. ರಾಸಾಯನಿಕ ಬಳಸಬೇಡಿರೆಂದು ತಿಳುವಳಿಕೆ ಹೇಳುತ್ತಾರೆ.
ಅವರು ಸ್ಥಾಪಿಸಿದ ಅಲೌಕಿಕ ಧ್ಯಾನ ಮಂದಿರದ ಸದುಪಯೋಗ ಮಾಡಿಕೊಳ್ಳಲು ಕರೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಪ್ರಮುಖರಾದ, ಕೃಷ್ಣ ಭಟ್, ಸತೀಶ್ ಮಾಳವದೆ, ಶ್ರೀಕಾಂತ ಕದಂ, ಬಸವರಾಜ ಹಳಂಗಳಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button