
ಪ್ರಗತಿವಾಹಿನಿ ಸುದ್ದಿ: ಭಾರತದ ಮೂರು ಪ್ರಮುಖ ದಾಳಿಯ ರೂವಾರಿ ಉಗ್ರ, ಎಲ್ಇಟಿ ಕಮಾಂಡರ್ ಸೈಫುಲ್ಲಾ ಖಾಲಿದ್ ನ ಹತ್ಯೆಯಾಗಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮನೆಯ ಬಳಿಯೇ ಅಪರುಚತರು ಸೈಫುಲ್ಲಾ ಖಾಲಿದ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಭಾರತದ ಮೇಲಿನ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಸೈಫುಲ್ಲಾ ಖಾಲಿದ್ ಕೊನೆಗೂ ಬಲಿಯಾಗಿದ್ದಾನೆ.
2001ರ ರಾಂಪುರ ಸಿಆರ್ ಪಿಎಫ್ ಕ್ಯಾಂಪ್ ಮೇಲಿನ ದಾಳಿ, 2005ರ ಬೆಂಗಳೂರಿನ IISc ಮೇಲೆ ನಡೆದ ದಾಳಿಯ ಸಂಚುಕೋರ, 2006ರಲ್ಲಿ ನಾಗ್ಪುರ ಆರ್.ಎಸ್.ಎಸ್ ಕಚೇರಿ ಮೇಲಿನ ದಾಳಿಯ ರೂವಾರಿಯಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ, ಎಲ್ ಇಟಿ ಕಮಾಂಡರ್ ಸೈಫುಲ್ಲಾ ಖಲೀದ್ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ.