Belagavi NewsBelgaum NewsKarnataka News
*ಕಾರ್ಮಿಕರ ಮೇಲೆ ಹರಿದ ಲಾರಿ : ಮೂವರು ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಷ್ಟ್ರೀಯ ಹೆದ್ದಾರಿಯ ವಿಭಜಕದ ಅಭಿವೃದ್ಧಿ ಮಾಡುತ್ತಿದ್ದ ಹತ್ತಾರು ಬಡ ಕೂಲಿ ಕಾರ್ಮಿಕರ ಮೇಲೆ ಲಾರಿಯೊಂದು ಹರಿದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಇಟಕಿ ಕ್ರಾಸ್ ಬಳಿ ನಡೆದಿದೆ.
ರವಿವಾರ ಬೆಳಗಿನ ಜಾವ ರಸ್ತೆ ಅಭಿವೃದ್ಧಿ ಮಾಡುತ್ತಿದ್ದ ಹತ್ತಾರು ಕಾರ್ಮಿಕರ ಮೇಲೆ ಲಾರಿ ಹರಿದಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಟ್ಯಾಂಕರ್ ಲಾರಿ ಸರ್ವೀಸ್ ರಸ್ತೆಗೆ ಉರಳಿ ಬಿದ್ದು ಆಯಿಲ್ ಸೋರಿಕೆಯಾಗುತ್ತಿದೆ. ಇದರಿಂದ ಸ್ಥಳದಲ್ಲಿ ಆತಂಕದ ಛಾಯೆ ಆವರಿಸಿದೆ. ಸ್ಥಳಕ್ಕೆ ಕಿತ್ತೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.




