Kannada NewsKarnataka NewsLatest

*ಪ್ರಿಯತಮೆ ಕಿರುಕುಳಕ್ಕೆ ಬೇಸತ್ತು ವಿವಾಹಿತ ವ್ಯಕ್ತಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಪ್ರಿಯತಮೆ ಕಿರುಕುಳಕ್ಕೆ ಬೇಸತ್ತು ವಿವಾಹಿತ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡುಬಂಡೆ ತಾಲೂಕಿನ ಬಾಅಪೂಜಿನಗರದಲ್ಲಿ ಈ ಘಟನೆ ನಡೆದಿದೆ. ಬಾಲಾಜಿ ಸಿಂಗ್ (38) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಪತ್ನಿ ಹಾಗೂ ಮಕ್ಕಳಿದ್ದರೂ ಬಾಲಾಜಿ ಸಿಂಗ್ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಸಾಕಷ್ಟು ಬುದ್ಧಿವಾದ ಹೇಳಿ ಆಕೆಯ ಸಂಬಂಧಿಕರು ಆಕೆಯಿಂದ ದೂರವಿದ್ದರು. ಆದರೂ ಮಹಿಳೆ ಬಾಲಾಜಿ ಸಿಂಗ್ ನಿಂದ ದೂರವಾಗಿರಲಿಲ್ಲ.

ಇದೀಗ ಬಾಲಾಜಿ ಸಿಂಗ್ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗುಡಿಬಂಡೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt


Related Articles

Back to top button