Belagavi NewsBelgaum NewsEducationKannada NewsKarnataka News

*ಸತತ ಪ್ರಯತ್ನ ,ಪರಿಶ್ರಮ ಶ್ರೇಷ್ಠವ್ಯಕ್ತಿಯನ್ನಾಗಿಸುತ್ತದೆ: ಸಿ‌. ಎಮ್ ತ್ಯಾಗರಾಜ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸತತ ಪರಿಶ್ರಮ ಶ್ರೇಷ್ಠ ವ್ಯಕ್ತಿಯನ್ನಾಗಿಸುತ್ತದೆ ಮತ್ತು ತಮ್ಮ ವ್ಯಕ್ತಿತ್ವವನ್ನ ರೂಪಿಸುತ್ತದೆ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಸಿ. ಎಮ್. ತ್ಯಾಗರಾಜ್ ಹೇಳಿದರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜ್ ನಲ್ಲಿ (ಫೆ.28) ಶನಿವಾರ ಪರಂಪರಾ, ಉಬ್ಬಂಟು ಕನ್ಸೊರ್ಟಿಮ್ ,ಎಸ್ಕೇಪ್ ಮತ್ತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ ದಿ ಡಿಜಿಟಲ್ ಟ್ರಾನ್ಸಸ್ಟಾರ್ಮೆಷನ್ ಇ ಕಾಮರ್ಸ್ ಮತ್ತು ಡಿಜಿಟಲ್ ಟ್ರಾನ್ಸಫಾರ್ಮೆಷನ್ ಟ್ರೈನಿಂಗ್ ಪ್ರೋಗ್ರಾಂ ಫಾರ್ ಉಮೆನ್ ಎಂಟರಪ್ರೆನರ್  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Home add -Advt

ಮಹಿಳೆಯರು ತಮ್ಮ ಶಕ್ತಿಯನ್ನ ಅರಿಯಬೇಕು, ಐದು ಜನ ಹೆಣ್ಣು ಮಕ್ಕಳ ವಿಚಾರ ಮಾಡಿದ್ರೆ ಮಾರುಕಟ್ಟೆ  ಬರುತ್ತದೆ, ಐವತ್ತು ಜನ ಹೆಣ್ಣು ಮಕ್ಕಳು ವಿಚಾರ ಮಾಡಿದ್ರೆ ಮಾರ್ಕೆಟ್ ಮಾಲ್ ಬರುತ್ತದೆ. ಇವತ್ತು ಡಿಜಿಟಲ್ ಮಾರುಕಟ್ಟೆ  ವೇಗವಾಗಿ ಬೇಳಿಯುತ್ತಿದೆ ಎಂದರು.

ವ್ಯಕ್ತಿಗಳು ತಮ್ಮ ಭವಿಷ್ಯವನ್ನ ರೂಪಿಸಿಕೊಳ್ಳಬೇಕು, ನಮ್ಮ  ಯೋಚನೆಯಂತೆ  ಐಡಿಯಾಗಳು ಹೊಳೆಯುತ್ತವೆ.ಹೆಲ್ಪಿಂಗ್ ಹ್ಯಾಂಡ್ ಅವೇಷನರಿ ಮಾಡುತ್ತದೆ ಎಂದು ಹೇಳಿದ ಅವರು ನಮ್ಮ ಜೀವನದಲ್ಲಿ ಬದ್ಧತೆ ಮುಖ್ಯ ಎಂದರು.

ಈಗ ಸದ್ಯ ಉದ್ಯಮ ಡಿಜಿಟಲ್ ಮಾರ್ಕೆಟ್ ಆಗಿದೆ, ನಾವು ಜಾನರಾಗಿ ಜಾನ ಹೆಜ್ಜೆ ಇಡಬೇಕಿದೆ,ಆ ದಿಶೆಯಲ್ಲಿ ಹೆಜ್ಜೆ ಇಡಬೇಕಿದೆ ಎಂದರು. ಹೆಣ್ಣು ಮಕ್ಕಳು ಸಶಕ್ತರಾಗಬೇಕು ಆ ನಿಟ್ಟಿನಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ  ಹೊಸ ಹೆಜ್ಜೆ ಇಡುತ್ತಿದೆ. ವಿದ್ಯಾರ್ಥಿಗಳ ಕನಸು ನನಸಾದರೆ ದೇಶದ ಕನಸು ನನಸಾದಂತೆ , ನಮ್ಮೆಲ್ಲರಿಗೂ ಗ್ರಹಿಸುವ ಶಕ್ತಿ ಇರಬೇಕು ಅಂದಾಗ ಮಾತ್ರ ಉತ್ತಮ ಉದ್ಯಮಿಯಾಗಲು ಸಾಧ್ಯ ಎಂದು ಹೇಳಿದರು.

ಇದೇ  ವೇಳೆ ನಿವೃತ್ತ IAS ಅಧಿಕಾರಿ  ರತ್ನಪ್ರಭಾ ಮಾತನಾಡಿ ಮಹಿಳೆಯರ ಶ್ರೇಯಸ್ಸು ಸ್ವಾವಲಂಬನೆಗಾಗಿ ಉಬ್ಬಂಟು ಸಂಸ್ಥೆ ಯಶಸ್ವಿಯಾಗಿ ಕೆಲಸ ಮಾಡಿ ಏಳನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ ಎಂದರು.

ಇದೇ ಸಮಯದಲ್ಲಿ ಜೋತಿ ಕೃಷ್ಣ  ಮಾತನಾಡಿ ನಮ್ಮ ಯೋಜನೆ,  ಯೋಚನೆಗಳು  ಎಲ್ಲರಿಗೂ ಗೊತ್ತಾಗಬೇಕಿದೆ. ನಮ್ಮ ಆಲೋಚನೆ ವಿವೇಚನೆಗಳು ಹೇಗೆ ರೂಪಗೊಳ್ಳುತ್ತದೆ ಎಂಬುದು ಮುಖ್ಯ, ಯಶಸ್ವಿಗೆ ಸತತ ಪ್ರಯತ್ನ ಮುಖ್ಯ  ಡಿಜಿಟಲ್ ಮಾರ್ಕೆಟ್ ನಲ್ಲಿ  ಯಶಸ್ವಿಯಾಗುವು ಮುಖ್ಯ ಎಂದರು.

ಈ ಸಂದರ್ಭದಲ್ಲಿ ಪರಂಪರಾ ಸಂಸ್ಥೆಯ ಸ್ಥಾಪಕಿ ಪ್ರೀಯಾ ಪುರಾಣಿಕ, ಮಾಯರಾ ಸಂಸ್ಥೆಯ ಸ್ಥಾಪಕಿ ರೂಪಾ ದೇಸಾಯಿ,  ಸೇರಿದಂತೆ ಹಲವು ಗಣ್ಯರು ಉಪಸ್ತಿತರಿದ್ದರು.

Related Articles

Back to top button