*ವೈಶ್ಯ ಸಮಾಜದ ಏಕತೆ, ಪ್ರಗತಿಗೆ ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ*

ವೈಶ್ಯ ಸಮಾಜದ ಏಕತೆ, ಪ್ರಗತಿಗೆ ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ
ಪ್ರಗತಿವಾಹಿನಿ ಸುದ್ದಿ/ ಬೆಳಗಾವಿ: ವೈಶ್ಯ ಸಮಾಜದ ವಿವಿಧ ಉಪಜಾತಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹರಡಿಕೊಂಡಿರುವ ಸಮುದಾಯದವರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ಶ್ರೀ ವೈಶ್ಯ ಗರಿಮಾ ಮಂಚದ ವತಿಯಿಂದ ಸೆಪ್ಟೆಂಬರ್ 6ರಂದು ಬೆಳಗಾವಿಯಲ್ಲಿ ಸ್ಥಾಪನಾ ದಿನ ಹಾಗೂ ವೈಶ್ಯ ಸಮ್ಮೇಳನ–2026 ಆಯೋಜಿಸಲಾಗಿದೆ.
ಶ್ರೀ ವೈಶ್ಯ ಗರಿಮಾ ಮಂಚ್ ಕರ್ನಾಟಕ ಪ್ರದೇಶ ಅಧ್ಯಕ್ಷ ರೋಹನ್ ಜುವಳಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ನಗರದ ರೈಲ್ವೆ ಓವರ್ಬ್ರಿಡ್ಜ್ ಸಮೀಪದ ಮರಾಠಾ ಮಂದಿರ ಕಾರ್ಯಾಲಯದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಸಮ್ಮೇಳನ ನಡೆಯಲಿದೆ. ವೈಶ್ಯ ಸಮಾಜದ ಏಕತೆ, ಪ್ರಗತಿ ಹಾಗೂ ಗೌರವವನ್ನು ಬಲಪಡಿಸುವ ಉದ್ದೇಶದಿಂದ ಆಯೋಜಿಸಿರುವ ಈ ವಿಶೇಷ ಸಮಾವೇಶದಲ್ಲಿ ಸಮಾಜದ ವಿವಿಧ ಸಂಘಟನೆಗಳು, ಮುಖಂಡರು ಹಾಗೂ ಸಮುದಾಯದ ಪ್ರಮುಖರು ಭಾಗವಹಿಸಲಿದ್ದಾರೆ.
ವೈಶ್ಯ ಸಮಾಜದ ಎಲ್ಲ ಉಪಜಾತಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ವಿವಿಧ ಉಪಜಾತಿಗಳು ಮತ್ತು ಪ್ರದೇಶಗಳಲ್ಲಿ ಹರಡಿಕೊಂಡಿರುವ ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡಿ, ಸಾಮೂಹಿಕವಾಗಿ ಸಮಾಜದ ಭವಿಷ್ಯ ರೂಪಿಸುವ ಕುರಿತು ಚರ್ಚೆ ನಡೆಸಲು ಸಮ್ಮೇಳನ ವೇದಿಕೆಯಾಗಲಿದೆ.
ಇದರೊಂದಿಗೆ ಸಾಂಸ್ಕೃತಿಕ ಪುನರುತ್ಥಾನಕ್ಕೂ ಆದ್ಯತೆ ನೀಡಲಾಗಿದೆ. ವೈಶ್ಯ ಸಮಾಜದ ಸಾಮಾನ್ಯ ಪರಂಪರೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಿ, ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಯುವ ಉದ್ಯಮಶೀಲತೆಗೆ ಆದ್ಯತೆ
ವೈಶ್ಯ ಸಮಾಜದ ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಸಮ್ಮೇಳನದ ಮತ್ತೊಂದು ಪ್ರಮುಖ ಆಶಯವಾಗಿದೆ. ಯುವಕರಿಗೆ ಉದ್ಯಮ ಕ್ಷೇತ್ರದಲ್ಲಿ ಅವಕಾಶಗಳನ್ನು ಸೃಷ್ಟಿಸುವುದು, ಪರಸ್ಪರ ಸಹಕಾರದ ಮೂಲಕ ಬಲಿಷ್ಠ ಬಿಸಿನೆಸ್ ನೆಟ್ವರ್ಕ್ ನಿರ್ಮಿಸುವುದು ಹಾಗೂ ಉದ್ಯಮ ಆರಂಭಿಸಲು ಮತ್ತು ವಿಸ್ತರಿಸಲು ಅಗತ್ಯವಿರುವ ಸಂಪರ್ಕ ಹಾಗೂ ಸಹಕಾರವನ್ನು ಬೆಳೆಸುವ ಕುರಿತು ಚಿಂತನೆ ನಡೆಯಲಿದೆ.
ಸಮುದಾಯದ ಆರ್ಥಿಕ ಪ್ರಗತಿಗೆ ಪೂರಕವಾಗಿ ಯುವ ಉದ್ಯಮಿಗಳಿಗೆ ಪರಸ್ಪರ ಮಾರ್ಗದರ್ಶನ, ಸಂಪರ್ಕ ಮತ್ತು ಸಹಭಾಗಿತ್ವದ ವೇದಿಕೆ ರೂಪಿಸುವ ಉದ್ದೇಶವೂ ಸಮ್ಮೇಳನದಲ್ಲಿದೆ.
ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲೂ ಒಗ್ಗಟ್ಟಿನ ಪ್ರಯತ್ನ
ಸಾಮಾಜಿಕ ಕಲ್ಯಾಣಕ್ಕೂ ವಿಶೇಷ ಆದ್ಯತೆ ನೀಡಲಾಗಿದ್ದು, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಸೇವಾ ಕ್ಷೇತ್ರಗಳಲ್ಲಿ ಸಮುದಾಯದ ಸದಸ್ಯರು ಒಗ್ಗೂಡಿ ಕಾರ್ಯನಿರ್ವಹಿಸುವ ವೇದಿಕೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಸಮಾಜದ ಅಗತ್ಯವಿರುವವರಿಗೆ ನೆರವು ನೀಡುವುದು ಹಾಗೂ ವಿವಿಧ ಸೇವಾ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು.
ಅಲ್ಲದೆ, ವೈಶ್ಯ ಸಮಾಜದ ಸಾಮೂಹಿಕ ಧ್ವನಿಯನ್ನು ಬಲಪಡಿಸಿ, ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಪರಿಹರಿಸುವ ನಿಟ್ಟಿನಲ್ಲಿ ಮುಂದಿನ ಕಾರ್ಯಯೋಜನೆ ರೂಪಿಸುವ ಗುರಿಯನ್ನು ಸಂಘಟಕರು ಹೊಂದಿದ್ದಾರೆ.
ಪ್ರಮುಖರು ಭಾಗಿ
ಸಮ್ಮೇಳನಕ್ಕೆ ರಾಷ್ಟ್ರೀಯ ಅಧ್ಯಕ್ಷ ಶತ್ರುಘ್ನ ಶಹ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಅಗ್ರವಾಲ್, ಸಂರಕ್ಷಕ ವಿಜಯಕುಮಾರ ಗರ್ಗ್ (Retd. IPS), ರಾಷ್ಟ್ರೀಯ ಕೋಶಾಧ್ಯಕ್ಷ ಜಯ ಕಿಶೋರ್ ಪ್ರಸಾದ್, ಕರ್ನಾಟಕ ಪ್ರದೇಶ ಅಧ್ಯಕ್ಷ ರೋಹನ್ ಜುವಳಿ, ಕರ್ನಾಟಕ ಪ್ರದೇಶ ಕಾರ್ಯದರ್ಶಿ ದತ್ತಾ ಕಣಬರ್ಗಿ, ಬೆಳಗಾವಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಮುಂದಡ ಹಾಗೂ ಜಿಲ್ಲಾ ಕಾರ್ಯದರ್ಶಿ ರಮೇಶ್ ಲದ್ದಡ ಸೇರಿದಂತೆ ಪ್ರಮುಖರು ಉಪಸ್ಥಿತರಿರುವರು.
ಇವರೊಂದಿಗೆ ವೈಶ್ಯವಾಣಿ ಸಮಾಜ, ಕನ್ನಡ ವೈಶ್ಯ ಸಮಾಜ, ಮಾಹೇಶ್ವರಿ ಸಮಾಜ, ಗುಜರಾತಿ ವೈಶ್ಯ ಸಮಾಜ, ಅಗ್ರವಾಲ್ ಸಮಾಜ, ಆರ್ಯವೈಶ್ಯ ಸಮಾಜ, ಸಿಂಧಿ ಸಮಾಜ ಸೇರಿದಂತೆ ಸಮಸ್ತ ವೈಶ್ಯ ಸಮಾಜದ ಪ್ರತಿನಿಧಿಗಳು ಹಾಗೂ ಆಯೋಜನಾ ಸಮಿತಿ ಕಾರ್ಯಕಾರಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
“ವೈಶ್ಯ ಸಮಾಜದ ಏಕತೆ, ಪ್ರಗತಿ ಮತ್ತು ಗೌರವ” ಎಂಬ ಆಶಯದೊಂದಿಗೆ ನಡೆಯುತ್ತಿರುವ ಈ ಸಮ್ಮೇಳನವು ಬೆಳಗಾವಿಯಲ್ಲಿ ವೈಶ್ಯ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ಉಪಜಾತಿಗಳನ್ನು ಒಂದೇ ವೇದಿಕೆಯಡಿ ತರುವ ಮಹತ್ವದ ಪ್ರಯತ್ನವಾಗಿದೆ. ಸಮಾಜದ ಎಲ್ಲ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಐತಿಹಾಸಿಕ ಏಕತೆಯ ಪ್ರಯತ್ನಕ್ಕೆ ಕೈಜೋಡಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಶ್ರೀ ವೈಶ್ಯ ಗರಿಮಾ ಮಂಚ್ನ ಗೌರವ ಕಾರ್ಯದರ್ಶಿ ದತ್ತಾ ಕಣಬರ್ಗಿ (ವೈಶ್ಯ ವಾಣಿ ಸಮಾಜ), ಬೆಳಗಾವಿ ಜಿಲ್ಲಾ ಶ್ರೀ ವೈಶ್ಯ ಗರಿಮಾ ಮಂಚ್ ಅಧ್ಯಕ್ಷ ರಾಜೇಂದ್ರ ಮುಂದಡಾ, ಸಿಎ (ಮಹೇಶ್ವರಿ ಸಮಾಜ), ಗೌರವ ಕಾರ್ಯದರ್ಶಿ ರಮೇಶ್ ಲದ್ದಡ್ (ಗುಜರಾತಿ ವೈಶ್ಯ ಸಮಾಜ), ಡಾ. ಶ್ರೀಧರ ಶೆಟ್ಟಿ (ಕನ್ನಡ ವೈಶ್ಯ ಸಮಾಜ), ಸಂತೋಷ ವಡವಾ (ಸಿಂಧಿ ಸಮಾಜ), ಪ್ರಮೋದ್ ಅಗರ್ವಾಲ್ (ಅಗರ್ವಾಲ್ ಸಮಾಜ) ಸೇರಿದಂತೆ ವಿವಿಧ ಸಮಾಜಗಳ ಪ್ರಮುಖರು ಉಪಸ್ಥಿತರಿದ್ದರು.
वैश्य समाजाच्या एकतेसाठी ६ सप्टेंबरला बेळगावात वैश्य संमेलन
बेळगाव : वैश्य समाजातील विविध उपजाती, संघटना आणि विविध क्षेत्रांत कार्यरत असलेल्या समाजबांधवांना एका व्यासपीठावर आणून समाजाची एकता, प्रगती आणि गौरव अधिक मजबूत करण्याच्या उद्देशाने श्री वैश्य गरिमा मंच यांच्या वतीने रविवार, दि. ६ सप्टेंबर २०२६ रोजी स्थापना दिवस एवं वैश्य संमेलन–२०२६ आयोजित करण्यात आले आहे.
श्री वैश्य गरिमा मंच कर्नाटक प्रदेश अध्यक्ष रोहन जुवली यांनी बुधवारी पत्रकार परिषदेत ही माहिती दिली.
बेळगाव शहरातील रेल्वे ओव्हरब्रिजजवळील मराठा मंदिर कार्यालयात सकाळी १० ते सायंकाळी ४ वाजेपर्यंत हे संमेलन होणार आहे.
वैश्य समाजातील विविध उपजाती आणि विविध भागांत विखुरलेल्या समाजबांधवांना एका व्यासपीठावर एकत्र आणणे, परस्परांमधील संवाद व सहकार्य वाढविणे आणि समाजाच्या सामूहिक भविष्यासाठी सकारात्मक दिशा निश्चित करणे हा या संमेलनाचा प्रमुख उद्देश आहे.
सांस्कृतिक वारशाचे जतन
वैश्य समाजाच्या समृद्ध परंपरा, संस्कृती आणि वारशाचे जतन करून तो पुढील पिढीपर्यंत पोहोचविण्यावरही संमेलनात भर देण्यात येणार आहे. समाजाच्या सांस्कृतिक ओळखीचे जतन करण्यासोबतच नव्या पिढीला आपल्या परंपरांची माहिती करून देण्याचा प्रयत्न या माध्यमातून केला जाणार आहे.
युवकांच्या उद्योजकतेला प्रोत्साहन
समाजातील युवकांमध्ये उद्योजकतेला चालना देणे हा संमेलनाचा महत्त्वाचा विषय आहे. युवकांसाठी मजबूत व्यावसायिक नेटवर्क तयार करणे, विविध व्यवसाय क्षेत्रातील समाजबांधवांमध्ये संपर्क वाढविणे आणि परस्पर सहकार्याच्या माध्यमातून नवीन व्यवसायाच्या संधी निर्माण करणे यावरही चर्चा होणार आहे.
युवकांनी पारंपरिक व्यवसायांसोबतच आधुनिक उद्योग, स्टार्टअप आणि विविध व्यावसायिक क्षेत्रांत पुढे यावे, यासाठी आवश्यक मार्गदर्शन व सहकार्याची व्यवस्था निर्माण करण्याचा प्रयत्न करण्यात येणार आहे.
शिक्षण, आरोग्य व सामाजिक कार्यावर भर
समाजाच्या सर्वांगीण विकासासाठी शिक्षण, आरोग्य आणि सामाजिक कल्याणाच्या क्षेत्रात सामूहिकपणे कार्य करण्यासाठी व्यासपीठ निर्माण करणे हा देखील संमेलनाचा उद्देश आहे.
समाजातील गरजू व्यक्तींना मदत करणे, विविध सामाजिक उपक्रमांचे समन्वय साधणे आणि समाजाच्या समस्या एकत्रितपणे सोडविण्यासाठी प्रभावी यंत्रणा उभारण्याबाबतही या संमेलनात विचारविनिमय केला जाणार आहे.
प्रमुख मान्यवरांची उपस्थिती
या संमेलनाला राष्ट्रीय अध्यक्ष शत्रुघ्न शहा, राष्ट्रीय सरचिटणीस जितेंद्र अग्रवाल, संरक्षक श्री. विजयकुमार गर्ग (निवृत्त IPS), राष्ट्रीय कोषाध्यक्ष जय किशोर प्रसाद, कर्नाटक प्रदेशाध्यक्ष रोहन जुवळी, कर्नाटक प्रदेश सचिव दत्ता कणबर्गी, बेळगाव जिल्हाध्यक्ष राजेंद्र मुंदडा तसेच जिल्हा सचिव रमेश लड्डड यांच्यासह समाजातील अनेक मान्यवर उपस्थित राहणार आहेत.
तसेच वैश्यवाणी समाज, कन्नड वैश्य समाज, माहेश्वरी समाज, गुजराती वैश्य समाज, अग्रवाल समाज, आर्यवैश्य समाज, सिंधी समाज यांच्यासह बेळगावातील समस्त वैश्य समाजाच्या प्रतिनिधींची उपस्थिती राहणार आहे.
“वैश्य समाजाची एकता, प्रगती आणि गौरव” या उद्देशाने आयोजित करण्यात आलेले हे संमेलन समाजातील विविध घटकांना एकत्र आणण्याच्या दृष्टीने महत्त्वपूर्ण ठरणार आहे. वैश्य समाजातील सर्व समाजबांधवांनी मोठ्या संख्येने उपस्थित राहून या ऐतिहासिक एकतेच्या प्रयत्नाला बळ द्यावे, असे आवाहन आयोजकांनी केले आहे.
पत्रकार परिषदेत कर्नाटक राज्य श्री वैश्य गरिमा मंचचे मानद सचिव दत्ता कणबर्गी (वैश्य वाणी समाज), बेळगाव जिल्हा श्री वैश्य गरिमा मंचचे अध्यक्ष राजेंद्र मुंडाडा, सी.ए. (महेश्वरी समाज), मानद सचिव रमेश लद्धाड (गुजराती वैश्य समाज), डॉ. श्रीधर शेट्टी (कन्नड वैश्य समाज), संतोष वडवा (सिंधी समाज), प्रमोद अग्रवाल (अग्रवाल समाज) यांच्यासह विविध समाजांचे प्रमुख उपस्थित होते.
Vaishya Sammelan 2026 to be held in Belagavi on September 6
Belagavi: With the objective of bringing together various sub-groups, organisations and members of the Vaishya community on a common platform, the Shri Vaishya Garima Manch will organise Sthapana Divas and Vaishya Sammelan 2026 on Sunday, September 6, in Belagavi.
Sri Vaishya Garima Manch Karnataka Region President Rohan Juvali gave this information in a press conference on Wednesday. The conference will be held from 10 a.m. to 4 p.m. at the Maratha Mandir Office, near the Railway Overbridge, Belagavi.
The main objective of the Sammelan is to strengthen unity among the various sections of the Vaishya community, promote mutual cooperation and chalk out a progressive vision for the community’s collective future.
Focus on unity and cultural heritage
The organisers aim to bring all Vaishya sub-communities onto a common platform and bridge the gaps that have developed among different groups and regions.
The Sammelan will also focus on preserving and promoting the community’s cultural heritage and traditions and ensuring that these values are passed on to the younger generation.
Promoting youth entrepreneurship
Encouraging entrepreneurship among youth is another major objective of the Sammelan. Discussions will focus on creating a strong business network within the community, promoting mutual cooperation among entrepreneurs and creating opportunities for young people to enter and expand their businesses.
The initiative also seeks to provide a platform for interaction, guidance and networking among established businesspersons, professionals and aspiring young entrepreneurs.
Education, healthcare and social welfare
The Sammelan will give importance to education, healthcare and social welfare. The organisers intend to create a platform through which community members can work together on social-service initiatives and extend support to people in need.
Strengthening the community’s collective voice and finding solutions to common issues through cooperation will also be among the key areas of discussion.
Prominent personalities to attend
The programme will be attended by National President Shatrughna Shaha, National General Secretary Jitendra Agrawal, Patron Vijaykumar Garg (Retd. IPS), National Treasurer Jai Kishore Prasad, Karnataka Pradesh President Rohan Juvali, Karnataka Pradesh Secretary Datta Kanbargi, Belagavi District President Rajendra Mundada and District Secretary Ramesh Laddada, among others.
Representatives of Vaishya Vani Samaj, Kannada Vaishya Samaj, Maheshwari Samaj, Gujarati Vaishya Samaj, Agarwal Samaj, Arya Vaishya Samaj and Sindhi Samaj, along with members of the wider Vaishya community in Belagavi, are also expected to participate.
The Vaishya Sammelan 2026 is expected to serve as an important platform for strengthening unity, cooperation and collective progress within the community.
The organisers have appealed to members of the Vaishya community to participate in large numbers and contribute to this initiative aimed at building a united, progressive and socially responsible community.
At the press conference, Karnataka State Shri Vaishya Garima Manch Hon. Secretary Datta Kanbargi (representing Vaishya Vani Samaj), Belagavi District Shri Vaishya Garima Manch President Rajendra Mundada, CA (representing Maheshwari Samaj), Hon. Secretary Ramesh Ladhad (representing Gujarati Vaishya Samaj), Dr. Shridhar Shetty (representing Kannada Vaishya Samaj), Santosh Wadawa (representing Sindhi Samaj), Pramod Agarwal (representing Agarwal Samaj), along with prominent members of various communities, were present.



