Kannada NewsKarnataka News

ಕೃಷಿ ಬೇಸಾಯದಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳಿ -ಡಾ.ಕೋರೆ

ಪ್ರಗತಿವಾಹಿನಿ ಸುದ್ದಿ, ಮಾಂಜರಿ  – ಗ್ರಾಮೀಣ ಭಾಗದ ರೈತರು ತಮ್ಮ ಕೃಷಿ ಬೇಸಾಯದಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಹೆಚ್ಚಿನ ಬೆಳೆ ಬೆಳೆದು ಆರ್ಥಿಕವಾಗಿ ಸದೃಢವಾಗಬೇಕು ಎಂದು ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಕೆಎಲ್ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ತಮ್ಮ ಸ್ವಗೃಹದಲ್ಲಿ  ಮೆಕ್ಕೆ ಜೋಳ ಬೀಜ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.  ಈ ವೇಳೆ ತುಕಾರಾಮ ಪಾಟೀಲ್, ಪಿಂಟು ಹಿರೇಕುರುಬರ್, ಬಸವರಾಜ್ ಕೋರೆ, ಅಣ್ಣಾಸಾಹೇಬ್ ಜಕಾತೆ, ಅಮರ್ ಶಿತೊಳೆ, ರಾಹುಲ್ ಜಾಧವ ಹಾಗೂ ಇನ್ನಿತರ ಹಾಜರಿದ್ದರು

Home add -Advt

Related Articles

Back to top button