Latest

ಸಂಪುಟ ವಿಸ್ತರಣೆ: ಯಡಿಯೂರಪ್ಪ ಮುಖದಲ್ಲಿ ಕಾಣದ ಗೆಲುವು

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಬಹುನಿರೀಕ್ಷೆತ ರಾಜ್ಯ ಸಚಿವಸಂಪುಟ ವಿಸ್ತರಣೆ ತಕ್ಷಣಕ್ಕೆ ಕೈಗೂಡುವ ಸಾಧ್ಯತೆ ಕಾಣುತ್ತಿಲ್ಲ. ವಿಸ್ತಣೆಯೋ, ಪುನಾರಚನೆಯೋ ಎನ್ನುವ ಅಂಶಕೂಡ ಸ್ಪಷ್ಟವಾಗಲಿಲ್ಲ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಬಹಳ ನಿರೀಕ್ಷೆ ಹೊತ್ತು ನವದೆಹಲಿಗೆ ತೆರಳಿದ್ದರು. ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಆದರೆ ಭೇಟಿ ಬಳಿಕ ಅವರ ಮುಖದಲ್ಲಿ ಗೆಲುವು ಕಾಣಲಿಲ್ಲ. ಬದಲಾಗಿ ನಿರಾಸೆಯ ಭಾವವೇ ತುಂಬಿತ್ತು.

ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದೇನೆ. ಎಲ್ಲ ವಿಷಯ ತಿಳಿಸಿದ್ದೇನೆ. ಇನ್ನು 2 -3 ದಿನದಲ್ಲಿ ಅವರು ನಿರ್ಧಾರ ತಿಳಿಸುತ್ತಾರೆ ಎಂದು ಯಡಿಯೂರಪ್ಪ ತಿಳಿಸಿದರು.

ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎನ್ನುವ ವಿಷಯವನ್ನು ಕೂಡ ಹೈಕಮಾಂಡ್ ಸ್ಪಷ್ಟವಾಗಿ ಹೇಳಲಿಲ್ಲ. ನೋಡೋಣ ಅವರು ತಿಳಿಸಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

Home add -Advt

ಹೈಕಮಾಂಡ್ ಭೇಟಿ ಯಡಿಯೂರಪ್ಪ ಮುಖದಲ್ಲಿ ಗೆಲುವು ಮೂಡಿಸಲಿಲ್ಲ. ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ತಂದು ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಹೈಕಮಾಂಡ್ ಕೃಪೆ ಸಿಗುತ್ತದೆ ಎಂದುಕೊಂಡಿದ್ದರು. ತಾವು ಹೇಳಿದ್ದಕ್ಕೆ ಎಸ್ ಎನ್ನುತ್ತಾರೆ ಅಂದುಕೊಂಡಿದ್ದರು. ಆದರೆ ಹೈಕಮಾಂಡ್ ಮತ್ತೆ ತನ್ನ ಎಂದಿನ ನೋಡೋಣ ಎನ್ನುವ ಮೂಲಕ ನಿರಾಸೆ ಮೂಡಿಸಿದೆ.

ಇದರಿಂದಾಗಿ ರಾಜ್ಯದಲ್ಲಿ ಸಂಪುಟ ವಿಸ್ತರಣೆಗಾಗಿ ಕಾದು ಕುಳಿತಿರುವ ಹಲವಾರು ಶಾಸಕರು ನಿರಾಶರಾಗಿದ್ದಾರೆ.

Related Articles

Back to top button