Kannada NewsKarnataka NewsLatest

ಮಹಾದೇವ ಗಂಜಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಗರದ ಶೆಟ್ಟಿಗಲ್ಲಿಯ ಹಿರಿಯರಾದ ಮಹಾದೇವ ರಾಚಪ್ಪ ಗಂಜಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
   ೭೮ ವರ್ಷದ ಮಹಾದೇವ ಅವರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಬುಧವಾರ ಬೆಳಿಗ್ಗೆ ಸದಾಶಿವ ನಗರ ರುದ್ರಭೂಮಿಯಲ್ಲಿ ಮೃತರ ಅತ್ಯಕ್ರಿಯೆ ನೆರವೇರಿಸಲಾಗುವುದು.
ಶೆಟ್ಟಿಗಲ್ಲಿ ರಹವಾಸಿಗಳು ಮಹಾದೇವ ಗಂಜಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಶೆಟ್ಟಿಗಲ್ಲಿ ಬಸವಣ್ಣ ಮಂದಿರದ ಟ್ರಸ್ಟಿಗಳಾಗಿ, ಹಿರಿಯ ನಾಗರಿಕರಾಗಿ ಇವರ ಸೇವೆ ಅಪಾರವಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button