Latest

ಫೇಸ್ ಬುಕ್ ಗೆಳೆಯನ ಭೇಟಿಗೆ ಹೋಗಿದ್ದ ಯುವಕನಿಗೆ ಖುಲಾಯಿಸಿದ 1 ಕೋಟಿ ಅದೃಷ್ಟ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಫೇಸ್ ಬುಕ್ ನಲ್ಲಿ ಪರಿಚಯನಾದ ಗೆಳೆಯನನ್ನು ಭೇಟಿಯಾಗಲೆಂದು ಕರ್ನಾಟಕದಿಂದ ಕೇರಳಕ್ಕೆ ಹೋಗಿದ್ದ ಯುವಕನಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಅದೃಷ್ಟ ಖುಲಾಯಿಸಿರುವ ಕಥೆಯಿದು.

ಫೇಸ್ ಬುಕ್ ಫ್ರೆಂಡ್ ಭೆಟಿಗೆಂದು ಕೇರಳಕ್ಕೆ ತೆರಳಿದ್ದ ಮಂಡ್ಯದ ಮದ್ದೂರು ತಾಲೂಕಿನ ಸೋಮನಹಳ್ಳಿಯ ಸೋಮನ್ ಬಲರಾಮ್ ಎಂಬ ಯುವಕನಿಗೆ ಇದೀಗ 1 ಕೋಟಿ ರೂ ಲಾಟರಿ ಖುಲಾಯಿಸಿದೆ.

ಕೇರಳದ ಪುಥನಾಥಣಿಗೆ ಹೋಗಿದ್ದ ಸೋಹನ್ ಗೆಳೆಯರ ಒತ್ತಾಯದ ಮೇರೆಗೆ 100ರೂ ಕೊಟ್ಟು ಭಾಗ್ಯಮಿತ್ರ ಲಾಟರಿ ಖರೀದಿಸಿದ್ದ. ಇದೀಗ ಸೋಹನ್ ಖರೀದಿಸಿದ್ದ ಲಾಟರಿ ಸಂಖ್ಯೆಗೆ 1 ಕೋಟಿ ರೂ ಬಂಪರ್ ಬಹುಮಾನ ಸಿಕ್ಕಿದೆ. ಇದರಿಂದ ಸೋಹನ್ ಅದೃಷ್ಟವೇ ಬದಲಾಗಿ ಹೋಗಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button