Kannada NewsLatest
ಪಿಎಂ ಪರಿಹಾರ ನಿಧಿಯಿಂದ ಧನಾದೇಶ ಪತ್ರ ವಿತರಣೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರು ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಧನಾಧೇಶ ಪತ್ರ ವಿತರಣೆ ಮಾಡಿದರು.
ಯಕ್ಸಂಬಾದ ಸ್ವ ಗೃಹದಲ್ಲಿ ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಮಾಂಜರಿ ಗ್ರಾಮದ ಫಲಾನುಭವಿಗಳಾದ ಆರಾದ್ಯ ವಿಜಯಕುಮಾರ ಭೋಜಕರ ಅವರಿಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ವೈಧ್ಯಕೀಯ ಚಿಕಿತ್ಸೆ ಸಲುವಾಗಿ ಮಂಜೂರಾದ 3,00,000 ರೂ ಗಳು ಹಾಗೂ ಜಲಾಲಪುರ ಗ್ರಾಮದ ಸುರೇಶ ಶಿವಪ್ಪ ಚೌಗಲೆ ಅವರಿಗೆ 3,00,000 ರೂ ಗಳ ಧನಾದೇಶ ಪತ್ರವನ್ನು ವಿತರಿಸಿದರು.


