
ಪ್ರಗತಿವಾಹಿನಿ ಸುದ್ದಿ, ಯಾದಗಿರಿ: ಕೃಷಿ ಹೊಂಡದಲ್ಲಿ ಬಿದ್ದು ಒಂದೇ ಕುಟುಂಬದ 6 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ದುರಂತ ಸಂಭವಿಸಿದ್ದು, ಪತಿ, ಪತ್ನಿ ಹಾಗೂ 4 ಮಕ್ಕಳು ಧಾರುಣ ಅಂತ್ಯ ಕಂಡಿದ್ದಾರೆ.
ಸಾಲಕ್ಕೆ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
ಪತಿ ಭೀಮರಾಯ ಸುರಪುರ (45), ಪತ್ನಿ ಶಾಂತಮ್ಮ (36), ಮಕ್ಕಳಾದ ಸುಮಿತ್ರಾ, ಶ್ರೀದೇವಿ, ಶಿವರಾಜ್ ಹಾಗೂ ಲಕ್ಷ್ಮೀ ಮೃತರು.
ಅಗ್ನಿ ಶಾಮಕದಳ ಹಾಗೂ ಈಜುಗಾರರಿಂದ ಶವಪತ್ತೆ ಮಾಡಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕೃಷ್ಣಾ ನದಿಯಲ್ಲಿ ಮುಳುಗಿದ ನಾಲ್ವರು ಸಹೋದರರು