Latest

ಭಾನುವಾರ ಬಿಜೆಪಿ ಬೌದ್ಧಿಕ ಪ್ರಮುಖರು, ಶಕ್ತಿಕೇಂದ್ರದ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಲೋಕಸಭಾ ಚುನಾವಣಾ ಪೂರ್ವಭಾವಿಯಾಗಿ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಗಳ ಬೌಧ್ಧಿಕ ಪ್ರಮುಖರ ಸಭೆಯನ್ನು ಭಾನುವಾರ ಬೆಳಗ್ಗೆ 10 ಗಂಟೆಗೆ ಕೆ.ಎಲ್.ಇ. ಸಂಸ್ಥೆಯ ಜೆ.ಎನ್. ಮೇಡಿಕಲ್ ಕಾಲೇಜ್ ಆವರಣದ ಆಡಿಟೋರಿಯಂ ನಲ್ಲಿ ಬಿಜೆಪಿ ಆಯೋಜಿಸಿದೆ. ಸಭೆಯಲ್ಲಿ ಗಣ್ಯ ವ್ಯಕ್ತಿಗಳು, ವೈದ್ಯರು ಹಾಗೂ ನ್ಯಾಯವಾದಿಗಳು ಉಪಸ್ಥಿತರಿರಲಿದ್ದಾರೆ. 

ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆಯನ್ನು ಅದೇ ದಿನ ಮಧ್ಯಾಹ್ನ  ೩ ಘಂಟೆಗೆ ಹಿರೇಬಾಗೆವಾಡಿಯಲ್ಲಿ ಆಯೋಜಿಸಲಾಗಿದೆ. ಸಭೆಗೆ ಕೇಂದ್ರದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ  ಡಾ. ಹರ್ಷವರ್ಧನ ಅವರು ಆಗಮಿಸಲಿದ್ದಾರೆ.

Home add -Advt

ಭಾರತೀಯ ಜನತಾ ಪಾರ್ಟಿಯ ಎಲ್ಲ ಶಾಸಕರು, ಸಂಸದರು ಹಾಗೂ ಶಕ್ತಿ ಕೇಂದ್ರದ ಪ್ರಮುಖರು ಸಭೆಗೆ ಹಾಜರಿರಬೇಕೆಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ಮುಖ್ಯಸಚೇತಕ ಹಾಗೂ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಸ್ತುವಾರಿಗ ಮಹಾಂತೇಶ ಕವಟಗಿಮಠ ಕೋರಿದ್ದಾರೆ.

ಈ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ. ವ್ಹಿ.ಆಯ್. ಪಾಟೀಲ, ಭಾರತೀಯ ಜನತಾ ಪಕ್ಷದ ಮುಖಂಡರಾದ ಈರಣ್ಣಾ ಕಡಾಡಿ, ರಾಜೇಂದ್ರ ಹರಕುಣಿ ಉಪಸ್ಥಿತರಿದ್ದರು.

Related Articles

Back to top button