ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಜೊಲ್ಲೆ ಉದ್ಯೋಗ ಸಮೂಹದ ಪ್ರೇರಣಾಶಕ್ತಿಯಾದ ಜ್ಯೋತಿಪ್ರಸಾದನ ಜನ್ಮದಿನದ ನಿಮಿತ್ತವಾಗಿ ಯಕ್ಸಂಬಾದ ಸ್ವ ನಿವಾಸದಲ್ಲಿ ಜಗಜ್ಯೋತಿ ಬಸವೇಶ್ವರನ ಭಾವಚಿತ್ರಕ್ಕೆ ಅಣ್ಣಾಸಾಹೇಬ ಜೊಲ್ಲೆ ಅವರ ಮಾತೋಶ್ರೀ ಲಕ್ಷ್ಮಿಬಾಯಿ ಜೊಲ್ಲೆ ಹಾಗೂ ಮುಜರಾಯಿ, ಹಜ್ ಮತ್ತು ವಕ್ಫ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಸವಜ್ಯೋತಿ ಯುಥ ಫೌಂಡೇಶನ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ನಮ್ಮ ಮನೆಯ ಬಂಗಾರ, ಸಂತೋಷದ ಪ್ರತೀಕವಾಗಿರುವ ಮಗ ಜ್ಯೋತಿಪ್ರಸಾದನಿಗೆ ಭಗವಂತನು ಆಯುರಾರೋಗ್ಯ ನೀಡಿ ಆಶೀರ್ವದಿಸಲಿ. ಅವನ ಭವಿಷ್ಯ ಸುಖಕರವಾಗಿರಲಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಸಾಹೇಬ ಜೊಲ್ಲೆ ಹಾರೈಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ