
ಪಂತ ಬಾಳೆಕುಂದ್ರಿ ರಾಜಮಾರ್ಗ ಅಭಿವೃದ್ಧಿಗೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿಯ ರಾಜಮಾರ್ಗ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭಾನುವಾರ ಚಾಲನೆ ನೀಡಿದರು.

ಕ್ಷೇತ್ರದ ಜನರು ನಮ್ಮ ಇಡೀ ಕುಟುಂಬವನ್ನು ತಮ್ಮದೇ ಕುಟುಂಬ ಎನ್ನುವಂತೆ ನೋಡುತ್ತಿದೆ. ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ನಾವೂ ಸಹ ಕ್ಷೇತ್ರದ ಜನರ ಕಷ್ಟ, ಸುಖಗಳಲ್ಲಿ ಸಮಾನವಾಗಿ ಭಾಗಿಯಾಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಹ ಇದೇ ರೀತಿಯ ಸಹಕಾರವಿರಲಿ ಎಂದು ಅವರು ನವಿನಂತಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗುಲಾಬಿ ಕೋಲಕಾರ, ಪಾರ್ವತಿ ತಳವಾರ, ಪಿಡಿಓ ಸುರೇಶ ಬಗಲಿ, ಅಪ್ಸರ್ ಜಮಾದಾರ, ರಸೂಲ್ ಮಕಾನದಾರ, ಮಹಮ್ಮದ್ ಜಮಾದಾರ, ಸುರೇಶ ಕಾಳೋಜಿ, ಹೊನಗೌಡ ಪಾಟೀಲ, ವೀಣಾ ಪಾಟೀಲ, ಶಿವಪ್ಪ, ಅಲ್ತಾಫ್, ಪ್ರೇಮ ಕೋಲಕಾರ ಹಾಗೂ ಮೊದಲಾದವರು ಉಪಸ್ಥಿತರಿದ್ದರು.