ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ ೧೧೦/೧೧ ಕೆವಿ ವಡಗಾಂವ ಹಾಗೂ ೩೩ ಕೆ.ವ್ಹಿ. ಆರ್ ಎಮ್-೨ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೧೨ ವಿದ್ಯಾನಗರ ಮತ್ತು ಎಫ್-೩ ಹಿಂದವಾಡಿ ಪೂರಕದ ಮೇಲೆ ಬರುವ ಚಿದಂಬರ ನಗರ, ಇಂದಿರಾನಗರ ಜಟ್ ಪಟ್ ಕಾಲೋನಿ, ಎಸ್ ವಿ ರೋಡ್ ರಘುನಾಥ ಪೇಟ್, ಬಾಬಲೆ ಗಲ್ಲಿ, ನಾಥ ಪೈ ಸರ್ಕಲ್, ೪ನೇ ರೈಲೈ ಗೇಟ್, ಲೋಹಾರ್ ಗಲ್ಲಿ, ಮತ್ತು ಬಾಂದುರ್ ಗಲ್ಲಿ ಸುತ್ತ ಮುತ್ತಲಿನ ಪ್ರದೇಶಗಳು ಹಾಗೂ ಗೋವಾ ವೇಸ್, ಗುಡ್ ಶೆಡ್ ರೋಡ್, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧುವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ದೇಶಮುಖ ರೋಡ್, ಹಿಂದವಾಡಿ, ಖಾನಾಪುರ ರೋಡ್ ಪ್ರದೇಶಗಳಲ್ಲಿ ಮೇ ೨ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ
ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೩೩ ಕೆ.ವ್ಹಿ. ಗಂದಿಗವಾಡ ಉಪಕೇಂದ್ರದಿಂದ ಸರಬರಾಜು ಆಗುವ ಗಂದಿಗವಾಡ, ಹಿರೇ ಅಂಗ್ರೋಳ್ಳಿ, ಚಿಕ್ಕ ಅಂಗ್ರೊಳ್ಳಿ, ಹಂದೂರ, ಹುಲಿಕೊತ್ತಲ, ಇಟಗಿ, ಬೋಗೂರ, ಬೇಡರಹಟ್ಟಿ, ತೊಲಗಿ, ಬಿಳಕಿ, ಅವರೊಳ್ಳಿ ಹಾಗೂ ಕಗ್ಗಣಗಿ ಗ್ರಾಮಗಳಲ್ಲಿ ಮೇ ೨ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.