Kannada NewsKarnataka News

​ನಂದಿಹಳ್ಳಿ: ದೇವಸ್ಥಾನ ಲೋಕಾರ್ಪಣೆ​

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ನಂದಿಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಜ್ಯೋತಿರ್ಲಿಂಗ (ಜ್ಯೋತಿಭಾ) ದೇವಸ್ಥಾನದ ಕಟ್ಟಡ ಭಾನುವಾರ ಉದ್ಘಾಟನೆಯಾಯಿತು. 

 
 ಗ್ರಾಮಸ್ಥರ ಸಮ್ಮುಖದಲ್ಲಿ  ಸಂಸದೆ ಮಂಗಲಾ ಅಂಗಡಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ದೇವಸ್ಥಾನವನ್ನು ಭಕ್ತರಿಗೆ ಅರ್ಪಿಸಿದರು.
ದೇವಸ್ಥಾನ ನಿರ್ಮಾಣದಿಂದಾಗಿ ಗ್ರಾಮದ ವಾತಾವರಣವೇ ಬದಲಾಗಲಿದೆ. ಜನರಲ್ಲಿ ಶಾಶ್ವತವಾಗಿ ನೆಮ್ಮದಿ ನೆಲೆಸಲಿದೆ. ದೇವಸಥಾನಕ್ಕೆ ಮತ್ತೇನಾದರೂ ಆಗಬೇಕಿದ್ದಲ್ಲಿ ಗಮನಕ್ಕೆ ತಂದರೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಮೃಣಾಲ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
​ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button